ಕೃಷ್ಣಭೈರೇಗೌಡ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ

ವರದಿ ಗುರುಮೂರ್ತಿ ಬೂದಿಗೆರೆ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿಯ ದೊಡ್ಡಚೀಮನಹಳ್ಳಿ ಗೇಟ್ ಬಳಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು ಶಾಸಕ ಕೃಷ್ಣಭೈರೇಗೌಡ ರವರ ನೇತೃತ್ವದಲ್ಲಿ ಕೃಷ್ಣಭೈರೇಗೌಡ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ತಾಲೂಕಿನ ಕುಂದಾಣ ಹೋಬಳಿಯ ದೊಡ್ಡಚೀಮನಹಳ್ಳಿ ಗ್ರಾಮದ ಆದರ್ಶ ಕಾಲೇಜು ಮುಂಭಾಗ ಎರಡು ದಿನಗಳ ಕಾಲ ನಡೆಯುವ ಟೂರ್ನಿಗೆ ಶಾಸಕ ಕೃಷ್ಣಭೈರೇಗೌಡ ಚಾಲನೆ ನೀಡಿದರು.

ಶಾಸಕ ಕೃಷ್ಣಭೈರೇಗೌಡ ಮಾತನಾಡಿ ಕುವೆಂಪು ನುಡಿದಂತೆ ಸರ್ವಜನಾಂಗದ ಶಾಂತಿಯ ತೋಟ ಎನ್ನುವುದನ್ನು ಇಂದಿನ ಸರ್ಕರ ಮರೆತು ಜಾತಿ ಜನಾಂಗದ ನಡುವರ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಯುವಕರು ಒಗ್ಗಟ್ಟಾಗಿದ್ರೆ ಸಮಾಜ ದೇಶ ಸುಭಿಕ್ಷವಾಗಿರುತ್ತದೆ. ಮನೆ ಹಿಡೆಯುವ ಮನೆಹಾಳರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಯುವಕರು ಪಣ ತೊಡಬೇಕೆಂದು ತಿಳಿಸಿದರು.ಈ ಟೂರ್ನಿಯಲ್ಲಿ ಮೊದಲ ಬಹುಮಾನ 50 ಸಾವಿರ ನಗದು, ಟಗರು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 30 ಸಾವಿರ ನಗದು ನಾಟಿ ಹುಂಜ ಹಾಗೂ ಆಕರ್ಷಕ ಟ್ರೋಪಿ ಮತ್ತು ತೃತೀಯ ಬಹುಮಾನ 10 ಸಾವಿರ ನಗದು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮುನಿನರಸಿಂಹಯ್ಯ, ಮಾಜಿ ಶಾಸಕ ವೆಂಕಟಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಕುಂದಾಣ ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಸ್ವಾಮಿ, ಲಕ್ಷ್ಮಿ ನಾರಾಯಣ, ಲಕ್ಷ್ಮಣ್ ಗೌಡ, ಚಿನ್ನಪ್ಪ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ದೇವರಾಜ್, ಚೇತನ್ ಗೌಡ, ಲಕ್ಷ್ಮಿಕಾಂತ್, ಆನಂದ್, ಹಾಗೂ ಇನ್ನು ಹಲವರು ಇದ್ದರು.

Be the first to comment

Leave a Reply

Your email address will not be published.


*