5A ನೀರಾವರಿ ಹೋರಾಟ ಸಮಿತಿ ವರದಿ ಜಾರಿಗಾಗಿ ಅನಿರ್ದಿಷ್ಟಾವಧಿ ಧರಣಿ…

ವರದಿ:- ಅಮರೇಶ ಕಲ್ಲೂರ ಸುದ್ದಿ ಸಂಪಾದಕರು

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಾರಾಯಣಪುರಬಲದಂಡೆ ಕಾಲುವೆಯ 5A ನೀರಾವರಿ ಯೋಜನೆ ಜಾರಿಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಈ ಭಾಗದ ರೈತರ ಬಹುನಿರೀಕ್ಷಿತ ಯೋಜನೆಯಾದ ಹೈವೇ ನೀರಾವರಿ ಯೋಜನೆ ಸುಮಾರು 12 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರು ಸಹ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಜಾರಿಯಾಗಿಲ್ಲ ಇದನ್ನು ವಿರೋಧಿಸಿ ಈ ಭಾಗದ ಅನೇಕ ರೈತಪರ ಹೋರಾಟಗಾರರು ಕಾಲುವೆ ಮೂಲಕ ಈ ಭಾಗಕ್ಕೆ ನೀರು ಬರುವವರೆಗೂ ಈ ಹೋರಾಟ ನಡೆಸುವುದಾಗಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡಹರ್ವಾಪುರ, ರವಿ ಜಹಗೀರದಾರ ಮಹದೇವಪ್ಪ ಪಲ್ಲೇದ ಸೇರಿದಂತೆ ಅನೇಕ ಮುಖಂಡರು ಹಾಗೂ ಚಿಲ್ಕರಾಗಿ ಗ್ರಾಮಸ್ಥರು ಭಾಗವಹಿಸಿದ್ದರು

Be the first to comment

Leave a Reply

Your email address will not be published.


*