ಭತ್ತದ ಗದ್ದೆಯಲ್ಲಿನ ಕಲುಷಿತ ನೀರು ಕುಡಿದು 22 ಕುರಿಗಳು ಸಾವು : ಚಿಕ್ಕನಹಳ್ಳಿ ಗ್ರಾಮದ ಕುರಿಗಾಹಿ ಕಂಗಾಲು

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಬೆಳಿಗ್ಗೆ ಮೇಯಲು ಹೋದ 22 ಕುರಿಗಳು ಗದ್ದೆಯಲ್ಲಿದ್ದ ನೀರು ಕುಡಿದ ಬಳಿಕ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಬಿಗ ನ್ಯೂಸ್ ಸುರಪುರ

ಸುರಪುರ(ಯಾದಗಿರಿ): ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಹಯ್ಯಾಳಪ್ಪ ಯಾದವ್ ಎಂಬುವವರಿಗೆ ಸೇರಿದ 22 ಕುರಿಗಳು ಮೇಯಲು ಹೋದಾಗ ಅಲ್ಲೇ ಗದ್ದೆಯಲ್ಲಿ ನಿಂತಿರುವ ಕಲುಷಿತ ನೀರನ್ನು ಕುಡಿದು ಸಾವನ್ನಪ್ಪಿವೆ.

ಬೆಳಗ್ಗೆ ಗ್ರಾಮದ ರೇಣುಕಾ ಎಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಭತ್ತದ ಗದ್ದೆಯಲ್ಲಿ ಕುರಿಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲಾಗಿತ್ತು.

ಕುರಿಗಳನ್ನು ಮೇಯಿಸಿ ನಂತರ ಅಲ್ಲೇ ಭತ್ತದ ಗದ್ದೆಯಲ್ಲಿ ಇರುವ ನೀರು ಕುಡಿಸಿದ್ದು, ನೀರು ಕುಡಿದ ಕುರಿಗಳು ಎರಡು ಗಂಟೆಯ ನಂತರ ಒಂದೊಂದಾಗಿ ಅಲ್ಲಲ್ಲಿ ಬಿದ್ದು ಸಾವನ್ನಪ್ಪಿವೆ ಎಂದು ಕುರಿಗಳ ಮಾಲೀಕ ಹಯ್ಯಾಳಪ್ಪ ತಿಳಿಸಿದ್ದಾರೆ.

ಸುದ್ದಿ ತಿಳಿದು ಪಶುಸಂಗೋಪನಾ ಇಲಾಖೆಯ ಡಾ. ಸುರೇಶ ಅಚ್ಚಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಧ್ಯ ವೈದ್ಯಕೀಯ ಪರೀಕ್ಷೆಯ ನಂತರ ಕುರಿಗಳ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿಯಲಿದೆ.

Be the first to comment

Leave a Reply

Your email address will not be published.


*