ಪಟ್ಟಣದ ತಾಲೂಕು ಆಡಳಿತ ಕಾರ್ಯಾಲಯ ನೂಲಿ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ ಜಯಂತಿ

ಪುಣ್ಯ ಪುರುಷರ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ ಹೇಳಿದರು.

 

ಕೊಲ್ಹಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಶಿವಶರಣ ನೂಲಿ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ ಜಯಂತಿ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದವರು.

 

ಕಾಯಕ ತತ್ವವನ್ನೇ ಉಸಿರಾಗಿಸಿಕೊಂಡು ಸಾಗಿದ ನೂಲಿ ಚಂದಯ್ಯ ಹಾಗೂ ಸಮಾಜ ಸುಧಾರಣೆಗಾಗಿ ಜೀವನ ಮುಡಿಪಾಗಿಟ್ಟ ನಾರಾಯಣ ಗುರೂಜಿ ಅವರ ತತ್ವಾದರ್ಶಗಳು ನಮಗೆ ಪ್ರೇರಣಾದಾಯಕ ಎಂದು ಅವರು ಹೇಳಿದರು.

 

ನೂಲಿ ಚಂದಯ್ಯನವರು ನಮ್ಮ ಸಮಾಜಕ್ಕೆ ಕಳಶಪ್ರಾಯ ಇದ್ದಂತೆ ಅವರ ಕಾಯಕ ತತ್ವದ ಪರಿಪಾಲನೆ, ಸೇವಾ ಮನೋಭಾವ ಸದಾಕಾಲಕ್ಕೂ ಪ್ರಸ್ತುತವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬಾಬು ಬಜಂತ್ರಿ ಪ್ರಾಸ್ತಾನಿಕವಾಗಿ ಮಾತನಾಡಿದರು

 

ಈ ಕಾರ್ಯಕ್ರಮದಲ್ಲಿ ಸುಭಾಸ್ ಬಜಂತ್ರಿ, ಲೊಕೇಶ್ ಪೂಜಾರಿ, ಮುದಕಪ್ಪ ಬಜಂತ್ರಿ, ಸಾಬು ಬಜಂತ್ರಿ, ಚಂದ್ರು ಬಜಂತ್ರಿ, ಚಂದ್ರಶೇಖರ ಈಟಿ, ಸದಾಶಿವ ಬಳೂತಿ ಹಾಗೂ ಸಿಬ್ಬಂದಿಗಳು ಸಂಘಟನೆಯ ಪದಾಧಿಕಾರಿಗಳು ಮತ್ತಿತರು ಭಾಗಿಯಾದರು.

Be the first to comment

Leave a Reply

Your email address will not be published.


*