ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

ವರದಿ:ಕುಮಾರ ನಾಯ್ಕ

ಕಾರವಾರ

ಹುಬ್ಬಳ್ಳಿಯಿಂದ ಹೊರಬರುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯು ಕೊಡಮಾಡುವ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ರತ್ನ ೨೦೨೨ ರಾಜ್ಯ ಪ್ರಶಸ್ತಿಗೆ ಉಮೇಶ ಮುಂಡಳ್ಳಿ ಅವರ ಹೆಸರು ಘೋಷಣೆಯಾಗಿರುತ್ತದೆ.ಉತ್ತರ ಕನ್ನಡ

CHETAN KENDULI

ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ೨೦೦೩ ರಿಂದ ಇದುವರೆಗೆ ಮೌನಗೀತೆ,ಭಾವಸುಮ, ಕರುನಾಡ ಕುಡಿಗಳು ಹಾಗೂ ನಾನೂ ಶಿಲ್ಪವಾಗಬೇಕು ಎಂಬ ನಾಲ್ಕು ಕವನ ಸಂಕಲನ ಗಳನ್ನು, ಬೆಂಕಿಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, “ಉತ್ತರಕನ್ನಡಕ್ಕೆ ಒಂದು ಸುತ್ತು” ಎನ್ನುವ ಪ್ರವಾಸಿ ಲೇಖನಗಳ ಸಂಕಲನ ಹಾಗೂ ” ಮಾತಾ ಮಹಿಮ” ಅಳ್ವೆಕೋಡಿ ದೇವಾಲಯ ಚರಿತ್ರೆ ಪುಸ್ತಕಗಳನ್ನು ,ಹನುಮಾಮೃತ ಎನ್ನುವ ಸಂಪಾದಿತ ಪುಸ್ತಕಗಳನ್ನು ಹೊರ ತಂದಿರುತ್ತಾರೆ .ಜೊತೆಗೆ ಭರವಸೆಯ ಛಾಯೆ ಎಂಬ ಧ್ವನಿಸುರುಳಿಯನ್ನು ೨೦೧೧ ರಲ್ಲಿಯೇ ನಾಡೋಜ ಪಾಟಿಲ್ ಪುಟ್ಟಪ್ಪ ನವರ ಅಮೃತ ಹಸ್ತದಲ್ಲಿ ಬಿಡುಗಡೆ ಗೊಳಿಸಿರುವುದು ವಿಶೇಷವಾಗಿದ್ದು , ಇತ್ತೀಚಿಗೆ ಕೆಲವು ಸ್ವರಚಿತ ಭಾವಗೀತೆಗಳು ಭಕ್ತಿಗೀತೆಗಳ ಅಲ್ಬಂ ಗಳನ್ನು ಹೊರತರುವ ಮೂಲಕ ಯೂಟ್ಯೂಬ್ ವೀಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಕೆಲವು ಯೋಜನೆಗಳ ಯಶಸ್ಸಿ ಅನುಷ್ಠಾನದಲ್ಲಿ ಮಾಹಿತಿ ಸಂವಹನದ ಸಾಹಿತ್ಯ ,ಗೀತೆಗಳ ರಚನೆಯಲ್ಲಿಯೂ ತೊಡಗಿಕೊಂಡಿರುತ್ತಾರೆ.ರಾಜ್ಯದ ಅನೇಕ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕವಿಗೋಷ್ಠಿ, ಸುಗಮಸಂಗೀತ ಹಾಗೂ ಅನೇಕ ಕಲಿಕಾ ಕಮ್ಮಟಗಳಲ್ಲಿಯೂ ಸದಾ ತೊಡಗಿಸಿಕೊಳ್ಳುತ್ತಿದ್ದು ಇವರಿಗೆ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಬಂದಿದ್ದು ಭಟ್ಕಳ ತಾಲೂಕಿನ ೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸಹ ಬಂದಿರುತ್ತದೆ.

ಇವರ ಸುದೀರ್ಘ ಸಾಹಿತ್ಯ ಚಟುವಟಿಕೆಗಳನ್ನು ಪರಿಗಣಿಸಿ ೨೦೨೨ರ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಜೊತೆಗೆ ಇವರೊಂದಿಗೆ ಇನ್ನೂ ಒಂಬತ್ತು ಜನರಿಗೆ ಉಳಿದ ಬೇರೆ ಬೇರೆ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವ ದರ್ಶನ ಪತ್ರಿಕೆಯ ಪ್ರಧಾನ ಸಂಪಾದಕರು, ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ರ ಸಲಹಾ ಸಮಿತಿ ರಾಜ್ಯ ಅಧ್ಯಕ್ಷರು ಆದ ಡಾ.ಎಸ್ ಎಸ್ ಪಾಟಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದೇ ಜುಲೈ ೨೦ ರವಿವಾರದಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ನಡೆಯುವ ವಿಶ್ವ ದರ್ಶನ ಪತ್ರಿಕೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಗುರುತಿಸಲ್ಪಟ್ಟ ರಾಜ್ಯದ ಹತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಸಂಪಾದಕರಾದ ಡಾ.ಎಸ್.ಎಸ್ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಶ್ರೀ ಯುತ ಉಮೇಶ ಮುಂಡಳ್ಳಿ ಯವರು ಈಗಾಗಲೇ
ಯುವಜನ ಸೇವಾ ಇಲಾಖೆಯಿಂದ ಯುವ ಪ್ರಶಸ್ತಿ,
ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ೨೦೦೭
ಬಸವ ಚೇತನ ಪ್ರಶಸ್ತಿ ೨೦೧೪
ಕರುನಾಡ ಸಾದಕ ಪ್ರಶಸ್ತಿ ೨೦೨೧ ರಲ್ಲಿ ಪಡೆದಿರುತ್ತಾರೆ.

Be the first to comment

Leave a Reply

Your email address will not be published.


*