ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನೇ ಕೊಂದ ಗಂಡ

ವರದಿ:ಬಸವರಾಜ ಮಕಾಶಿ


    ಕ್ರೈಮ್ ಫೋಕಸ್


ಕಲಘಟಗಿ  : ಕ್ಷುಲ್ಲಕ ಕಾರಣಕ್ಕೆ ಗಂಡನೇ ತಾಳಿ ಕಟ್ಟಿದ ಹೆಂಡತಿಯನ್ನು ಕೊಂದು ಹಾಕಿದ ಘಟನೆ ಕಲಘಟಗಿಯಲ್ಲಿ ನಡೆದಿದೆ.

ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿ ಹಸೀನಾಬಾನು ರಾಜೇಸಾಬ ಮಾಣೆಕಬಾಯಿ (28) ಎಂಬ ಮಹಿಳೆ
ಕೊಲೆಯಾದವಳು.

ಆಕೆಯನ್ನು ಕೊಲೆ ಮಾಡಿದ ಬಳಿಕ
ಗಂಡ ರಾಜೇಸಾಬ ಪರಾರಿಯಾಗಿದ್ದಾನೆ.

ಸರಿಯಾಗಿ ಅಡುಗೆ ಮಾಡಲು ಬರುದಿಲ್ಲ ಎಂದು ಜಗಳ ತೆಗದು ಮಾನಸಿಕ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದ.

ಮಂಗಳವಾರ ನಸುಕಿನ ವೇಳೆ ಹೆಂಡತಿ ಮಲಗಿಕೊಂಡಾಗ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆ.

ಈ ಕುರಿತು ಮೃತಳ ಸಂಬಂಧಿಕರು ದೂರ ನೀಡಿದ್ದು, ಕಲಘಟಗಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*