ಮಕ್ಕಳ ಕಳ್ಳಸಾಗಣೆ ಆರೋಪ, ಕಾಂಗ್ರೆಸ್ ಕಾರ್ಯಕರ್ತೆಯ ವಿಚಾರಣೆ

ವರದಿ: ನಾಗೇಶ ದಳವಾಯಿ


ಬಾಗಲಕೋಟ::(ಸೆ:24)  ಮಕ್ಕಳ‌ ಕಳ್ಳ ಸಾಗಣೆ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ರೇಖಾ ಕಾಂತಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಜಮಖಂಡಿಯಲ್ಲಿ ಅಮ್ಮ ಆಶ್ರಮ‌ ಹೆಸರಿನಲ್ಲಿ ರೇಖಾ ಕಾಂತಿಯವರು ಪರವಾನಗಿ ಪಡೆಯದೆ ವೃದ್ಧಾಶ್ರಮ ನಡೆಸುತ್ತಿರುವುದು ತಿಳಿದು ಬಂದಿದೆ.

ಆಶ್ರಮದಲ್ಲಿನ ವೃದ್ಧರಿಂದ ತಮ್ಮ ಮನೆಗೆಲಸಗಳನ್ನು ಮಾಡಿಸಿಕೊಳ್ಳುತ್ತಿರುವ ಹಾಗೂ ವಾಹನ ತೊಳೆಸುತ್ತಿರುವ ದೃಶ್ಯಗಳು ಬಹಿರಂಗವಾಗಿದ್ದು, ಆಶ್ರಮದ ಟೆರೇಸ್ ನಲ್ಲಿ ರಾಸಲೀಲೆಯ ದೃಶ್ಯವೂ ಸಂಚಲನ ಮೂಡಿಸಿದೆ.

ಅಪ್ರಾಪ್ತೆಯನ್ನು 7 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿರುವ ಆರೋಪ ರೇಖಾ ಮೇಲಿದೆ. 

ಮಕ್ಕಳ ಕಳ್ಳ ಸಾಗಣೆ ಕುರಿತಂತೆ ಶಂಕೆ ವ್ಯಕ್ತಪಡಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Be the first to comment

Leave a Reply

Your email address will not be published.


*