ಕರ್ನಾಟಕ ರಾಜ್ಯ ಸರ್.ಎಂ.ವಿ ಕಾರ್ಮಿಕರ ಸೇವಾ ಸಂಘದ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ.

ವರದಿ ಅಂಬಿಗ ನ್ಯೂಸ್

ಜಿಲ್ಲಾ ಸುದ್ದಿಗಳು

ಚಿಕ್ಕಬಳ್ಳಾಪುರ

CHETAN KENDULI

ಕರ್ನಾಟಕ ರಾಜ್ಯ ಸರ್.ಎಂ.ವಿ ಕಾರ್ಮಿಕರ ಸೇವಾ ಸಂಘದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವನ್ನು ನರಗರದ ಜಿಲ್ಲಾಸ್ಪತ್ರೆ ರಸ್ತೆಯಲ್ಲಿರುವ ಶ್ರೀ ಯೋಗಿನಾರಾಯಣ ಕಾಂಪ್ಲೆಕ್ಸ್ ನಲ್ಲಿರುವ ಸಂಘಟನೆಯ ಕಛೇರಿಯಲ್ಲಿ ಹಮ್ಮಿಕೊಂಡು, ನೂತನವಾಗಿ ಆಯ್ಕೆಗೊಂಡ ತಾಲೂಕಿನ ಪದಾಧಿಕಾರಿಗಳಿಗೆ ಸಂಘಟನೆಯ ರಾಜ್ಯದ್ಯಕ್ಷ ಸಿ.ಪ್ರಕಾಶ್ ಮತ್ತು ಜಿಲ್ಲಾಧ್ಯಕ್ಷ ಜಿ.ವಿ ಮೂರ್ತಿ ನೇತೃತ್ವದಲ್ಲಿ ಪ್ರಮಾಣ ಪತ್ರ ಹಾಗೂ ಐಡಿ ಕಾರ್ಡ್ಗಳನ್ನು ವಿತರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷ ಸಿ. ಪ್ರಕಾಶ್ ಮಾತನಾಡಿ ಕಾರ್ಮಿಕರಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ಕೊಡಿಸುವಂತಹ ಕೆಸಗಳಿಗೆ ಈ ಸಂಘಟನೆ ಪದಾಧಿಕಾರಿಗಳು ಮುಂದಾಗಿರಬೇಕು, ಸರ್ಕಾರದಿಂದ ಕೊಡುವಂತಹ ಸವಲತ್ತುಗಳನ್ನು ಕಾರ್ಮಿಕರಿಗೆ ನೀಡಿಸುವತಂಹ ಕಾರ್ಯಕ್ಕೆ ನೀವು ಮುಂದಾಗಬೇಕು. ಕಾರ್ಮಿಕರ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸ ಕೋಡಿಸುವಂತಹದು ಹಾಗೂ ಉನ್ನತ ಮಟ್ಟದ ಕೆಲಸ ಕೊಡಿಸುವಂತಹದ್ದು ಮಾಡಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕಿನ ಪದಾಧಿಕಾರಿಗಳಿಗೆ ಕಿವಿ ಮಾತು ಹೇಳಿ ನೂತನವಾಗಿ ಆಯ್ಕೆ ಯಾದ ತಾಲೂಕು ಪದಾಧಿಕಾರಿಗಳಿಗೆ ಶುಭಹಾರೈಸಿ ಸನ್ಮಾನಿಸಲಾಯಿತು .


ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಅಧ್ಯಕ್ಷ ತಿಪ್ಪೇನಹಳ್ಳಿ ಮುನಿರಾಜು, ಗೌರವಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಅಗಲಗುರ್ಕಿ ಮುನಿಕೃಷ್ಣಪ್ಪ, ಕಾರ್ಯದರ್ಶಿ ಮೈಲಾರಪ್ಪ, ಸಂಚಾಲಕರು ನಾಗರಾಜ್ ಮತ್ತು ಮುನಿರಾಜ್, ಸ್ಟೂಡಿಯೋ ಮೂರ್ತಿ, ಬಿ.ಎಮ್. ರಮೇಶ್, ಅಂಬರೀಶ್, ಮುರಳಿ, ಬಚ್ಚಹಳ್ಳಿ ಶ್ರೀನಿವಾಸ್, ಶ್ರೀನಿವಾಸ್, ಕೃಷ್ಣಮೂರ್ತಿ, ಚಂದ್ರಶೇಖರ್ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*