ಮೀನಿನ ಬಲೆ ಬಿಡುವಾಗ ಹೃದಯಾಘಾತ; ವ್ಯಕ್ತಿ ಕುಸಿದು ಬಿದ್ದು ಸಾವು

ವರದಿ-ಕುಮಾರ್ ನಾಯ್ಕ.ಭಟ್ಕಳ

ರಾಜ್ಯ ಸುದ್ದಿ

CHETAN KENDULI

ಭಟ್ಕಳ: ತಾಲೂಕಿನ ಮುರ್ಡೇಶ್ವರ ಮಾವಳ್ಳಿ 1ರ ತೂದಳ್ಳಿ ಸಮುದ್ರ ದಡದಲ್ಲಿ ಮೀನಿನ ಬಲೆ ಬಿಡುವಾಗ ವ್ಯಕ್ತಿಯೋರ್ವ ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ನಡೆದಿದೆ.


ಮೃತ ವ್ಯಕ್ತಿ ಜಟ್ಟಿ ನಾರಾಯಣ ಮೊಗೇರ ಎಂದು ಗುರುತಿಸಲಾಗಿದೆ. ಜಟ್ಟಿ ಮೊಗೇರ ಮುರ್ಡೇಶ್ವರ ಮಾವಳ್ಳಿ-01ರ ಕಿಸಗಾರಮಕ್ಕಿ ನಿವಾಸಿ ಎಂದು ತಿಳಿದುಬಂದಿದೆ. ಈತ ಮೀನುಗಾರಿಕೆಯನ್ನು ಜೀವನದ ಉದ್ಯೋಗವಾಗಿಸಿಕೊಂಡು ಬದುಕುತ್ತಿದ್ದ ಎನ್ನಲಾಗಿದೆ. ಇವರು ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬಿ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬಿಡುವಾಗ ದೀಢರನೆ ಎದೆ ನೋವು ಬಂದಂತಾಗಿ ಸಮುದ್ರದ ದಡದಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.


ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ನಾಗರಾಜ ಜಟ್ಟಿ ಮೊಗೇರ, ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಮುರ್ಡೇಶ್ವರ ಠಾಣೆ ಪೊಲೀಸರು  ತನಿಖೆ ಕೈಗೊಂಡಿದ್ದಾರೆ.

Be the first to comment

Leave a Reply

Your email address will not be published.


*