ಬಾಗಲಕೋಟೆ:ನವನಗರದ ಮ್ಯೂಸಿಕಲ್ ಪ್ಲ್ಯಾಂಟ ಪಿಟ್ನೇಸ ಜಿಮ್ ವಿದ್ಯಾರ್ಥಿ ಮಲ್ಲಿಕಾರ್ಜುನ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸಾದನೆ ಮಾಡಿದ್ದು ಅವರಿಗೆ ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ದೊಡ್ಡಬಳ್ಳಾಪುರ ದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ,
ರಾಯಚೂರು ನಲ್ಲಿ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಮೂರನೇ ಸ್ಥಾನ,ಶಿರಸಿ ಯಲ್ಲಿ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ,
ವಿಜಯಪುರ ಜಿಲ್ಲೆಯ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಾಗಲಕೋಟ ನಗರಕ್ಕೆ ಕಿರ್ತಿ ತಂದಿದ್ದಾರೆ.ಇಂದು ಜಿಮ್ ನಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಜಿಮ್ ವತಿಯಿಂದ ಮಲ್ಲಿಕಾರ್ಜುನ ಅಂಬಿಗೇರ ಯುವಕನಿಗೆ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸಾದನೆ ಮಾಡಿದರಿಂದ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವುಕುಮಾರ ಮೇಲ್ನಾಡ, ವಿಜಯ ಸುಲಾಖೆ, ರಾಜು ನಾಯಕ,ಮಂಜು ನ್ಯಾಮಗೌಡ,ಕೃಷ್ಣ ರಾಜೂರ,ಜಿಮ್ ಮಾಲಿಕರಾದ ಹರಿಶ, ಸಂತೋಷ ಪಡಸಲಗಿ ಹಾಗೂ ಜಿಮ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Be the first to comment