ಕಾರ್ಕಳ : ಎಚ್ಚರ ತಪ್ಪಿದರೆ ಅಪಾಯ ಖಚಿತ ಎಂಬ ಮಾತು ಯಾವ ಕ್ಷಣದಲ್ಲೂ ಸುಳ್ಳಾಗುವುದಿಲ್ಲ ಎಂಬುದಕ್ಕೆ ಕಾರ್ಕಳದಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಯಾವುದೇ ಮುಂಜಾಗ್ರತೆಯಿಲ್ಲದೆ ರಸ್ತೆ ಮೇಲೆ ಹೊಸ ವರ್ಷಕ್ಕೆ ಶುಭಾಶಯ ಕೋರಿ “ಹ್ಯಾಪಿ ನ್ಯೂ ಇಯರ್” ಎಂದು ಸಂದೇಶ ಬರೆಯಲು ಹೋಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಶರಣ್ (32) ಮತ್ತು ಸಿದ್ದು (28) ಎಂದು ಗುರುತಿಸಲಾಗಿದೆ.

ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಹಾಗೂ ಇತರ ಇಬ್ಬರು ಸ್ನೇಹಿತರು ನಿನ್ನೆ ತಡರಾತ್ರಿ ಕಾರ್ಕಳದ ಮಿಯಾರು ಕಾಜರ ಬೈಲು ಎಂಬಲ್ಲಿ ‘ಹ್ಯಾಪಿ ನ್ಯೂ ಈಯರ್’ ಎಂದು ರಸ್ತೆಯಲ್ಲಿ ಬರೆಯಲು ಮುಂದಾಗಿದ್ದರು. ಆದರೆ, ಈ ವೇಳೆ ವೇಗವಾಗಿ ಬಂದ ಈಕೊ ಕಾರೊಂದು ಢಿಕ್ಕಿಯಾಗಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಗಾಯಗೊಂಡ ತೌಸೀಫ್ ಮತ್ತು ಬಸವರಾಜು ಎಂಬವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment

Leave a Reply

Your email address will not be published.


*