400ಕ್ವಿಂಟಲ್ ಮೆಕ್ಕೇಜೋಳದ ತೆನೆಯರಾಶಿ ಅಗ್ನಿಆಹುತಿ 5ಲಕ್ಷದಷ್ಟು ನಷ್ಟ.

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಹಾವೇರಿ ಜಿಲ್ಲೆ ಗುತ್ತಲಗ್ರಾಮದಲ್ಲಿ ಹೊಲದಲ್ಲಿದ್ದ 400ಕ್ವೀಂಟಲ್ ತೂಕದ ಮೆಕ್ಕೇಜೋಳದ ತೆನೆಯ ಬೃಹತ್ ರಾಶಿ ಅಗ್ನಿಗೆ ಆಹುತಿಯಾದ ದುಘ೯ಟನೆ ಬುಧವಾರ ಮಧ್ಯರಾತ್ರಿ ಜರುಗಿದೆ.ಗುತ್ತಲ ಗ್ರಾಮದ ರೈತ ಚನ್ನಪ್ಪ ಕುರುವತ್ತಿಗೌಡ್ರು ಎಂಬುವರಿಗೆ ಸೇರಿದ ಹೊಲದಲ್ಲಿದ್ದ ಮೆಕ್ಕೇಜೋಳದ ತೆನೆಯ ರಾಶಿಗೆ ಮಧ್ಯರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೆಂಕಿಯನ್ನಚ್ಚಿದ್ದಾರೆ ಎಂದು ಶಂಕಿಸಲಾಗಿದೆ.ವಿಷಯ ತುಂಬಾ ತಡವಾಗಿಯೇ ತಿಳಿದಿದ್ದು.ಗ್ರಾಮಸ್ಥರೊಡಗೂಡಿ ಬೆಂಕಿಯನ್ನು ನಂದಿಸುವ ಹರಸಾಹಸ ಮಾಡಿದ್ದಾರೆ.

ರಾಶಿಯನ್ನು ಸಂಪೂಣ೯ವಾಗಿ ಅಕ್ರಮಿಸಿರುವ ಬೆಂಕಿಯ ಆಭ೯ಟವನ್ನು ತಡೆಯುವ ಎಲ್ಲಾಪ್ರಯತ್ನಗಳು ವಿಫಲಾವಾಗಿವೆ.ಹತ್ತಿರದ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಪರಿಣಾಮ ಮೆಕ್ಕೇಜೋಳದ ತೆನೆಯ ರಾಶಿ ಸಂಪೂಣ೯ ಬೆಂಕಿಗೆ ಆಹುತಿಯಾಗಿ ಭಸ್ಮವಾಗಿದೆ.ಇದರಿಂದಾಗಿ ಸುಮಾರು 5ಲಕ್ಷರೂಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಘಟನೆ ಸ್ಥಳಕ್ಕೆ ಕಂದಾಯ ಅಧಿಕಾರಿಗಳು.ತಹಶಿಲ್ದಾರರು ಬೆಟ್ಟಿ ನೀಡಿ ಪರಿಶೀಲಿಸಿದ್ದಾರೆ.

Be the first to comment

Leave a Reply

Your email address will not be published.


*