ಜೇವರ್ಗಿ ತಾಲೂಕ ಆಡಳಿತ ವತಿಯಿಂದ ಡಿ ದೇವರಾಜ್ ಅರಸ ಅವರ 108ನೇ ಜನ್ಮದಿನೋತ್ಸವ ಆಚರಣೆ.

ಜೇವರ್ಗಿ: ಪಟ್ಟಣದ ವಿಧಾನಸೌಧ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಅಭಿವೃದ್ಧಿ ಹರಿಕಾರ ಸಮ ಸಮಾಜದ ಹರಿಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಡಿ ದೇವರಾಜ ಅರಸು ಅವರ 108ನೇ ಜನ್ಮದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅಂಬವ್ವ ಪೂಜಾರಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಪ್ರಸನ್ನ ಕುಮಾರ್ ಗ್ರೇಡ್ ll ತಹಶೀಲ್ದಾರರು ಜೇವರ್ಗಿ, ಶ್ರೀ ಅಬ್ದುಲ್ ನಬಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜೇವರ್ಗಿ, ಶ್ರೀ ಅಶೋಕ್ ನಾಯಕ್ ಸಹಾಯಕ ವ್ಯವಸ್ಥಾಪಕರು ಸಮಾಜ ಕಲ್ಯಾಣ ಇಲಾಖೆ ಜೇವರ್ಗಿ, ಶ್ರೀ ಎಸ್ ಬಿ ಬಿರಾದಾರ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿಗಳು ಶ್ರೀಮತಿ ಜಗದೇವಿ ಅಬಕಾರಿ ಇಲಾಖೆ ಜೇವರ್ಗಿ ಶ್ರೀಮತಿ ಶಕುಂತಲಾ ಅಲ್ಪಸಂಖ್ಯಾತ ಇಲಾಖೆ ಜೇವರ್ಗಿಅವರು ಆಗಮಿಸಿದರು.

ಮತ್ತು ಮಹೇಶ್ ನಾಯಕ್ ಶಿವಶರಣಪ್ಪ ಕುಂಬಾರ್ ಮೈಬುಬ ಅಲಿ ಹಸನ್, ಸಾಯಿಬಣ್ಣ ತಳವಾರ, ಚಂದ್ರಶೇಖರ್ ಕಂದಾಯ ನಿರೀಕ್ಷಕರು, ರಮೇಶ್,ಗಂಗಾಧರ್ ಮಲ್ಲಯ್ಯ ಹಿರೇಮಠ ಬಸಣ್ಣ ಸರ್ಕಾರ್ ಸೇರಿದಂತೆ ವಸತಿ ನಿಲಯಗಳ ಮೇಲ್ವಿಚಾರಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಶ್ರೀ ಬಿಡ್ಡಪ್ಪ ಚೆನ್ನೂರ್ ವಿಶೇಷ ಉಪನ್ಯಾಸವನ್ನು ನೀಡಿದರು. ಶ್ರೀ ಗುರುಶಾಂತಪ್ಪ ಚಿಂಚೋಳಿ ಶಿಕ್ಷಕರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಮಹೇಶ್ ನಾಯಕ್ ವಂದನಾರ್ಪಣೆ ಮಾಡಿದರು.

Be the first to comment

Leave a Reply

Your email address will not be published.


*