ಹುಣಸಗಿ: ಸಮೀಪದ ಮಾಳನೂರು ಗ್ರಾಮದ ನಿವಾಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಫೀಕ್ ಇಮಂದರ ಹಾಗೂ ಉಸೇನ ಬಾಷಾ ಇಮಂದರ ಯಮನೂರು
ಇವರು ರಾಜಾವೆಂಕಟಪ್ಪ ನಾಯಕ ಅವರು ಶಾಸಕರಾಗಲೆಂದು ರಾಜಭಕ್ಷಾ ದರ್ಗಾಕ್ಕೆ ಹೊತ್ತಿದ್ದ ಹರಕೆ ಹೊತ್ತುಕೊಂಡಿದ್ದು ಇಂದು ಹರಕೆ ತೀರಿಸಿದರು.
ಜೊತೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲೆಂದು ಗ್ರಾಮದ ಹೊಳೆಯಿಂದ ರಾಜಭಕ್ಷ ದರ್ಗಾ ವರಿಗೂ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ 15 ಕೆ.ಜಿ ತೂಕ ಇರುವ ಕಂಚಿನ ಗಂಟೆಯನ್ನು ದೇವರಿಗೆ ಅರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಳನೂರು ಗ್ರಾಮ ಪಂಚಾಯತ ಸದಸ್ಯರಾದ RK ಜಮಾದಾರ ಹಾಗೂ ಸಿದ್ದರಾಮಯ್ಯ ಹೊಸಮನಿ ಚೆನ್ನಪ್ಪ ದೊರೆ ಕಕ್ಕೇರಿ ಸೇರಿದಂತೆ ಇತರರು ಇದ್ದರು.
Be the first to comment