ಹುಣಸಗಿ: ತಾಲೂಕಿನ ಕೊಡೆಕಲ್ ಹೋಬಳಿಯ ಹಗರಟಗಿ ಗ್ರಾಮದ ನಿವಾಸಿ ಶತಾಯುಷಿ ಹಿರಿಯ ಜೀವಿ ಬಾಳಮ್ಮ ಮಹಾಂತಗೌಡ ಪಾಟೀಲ್ (105) ಅವರು ಸುರಪುರದ ಹಿರಿಯ ನ್ಯಾಯವಾದಿ ಅಪ್ಪಾಸಾಹೇಬ್ ಪಾಟೀಲ್ ಅವರ ತಾಯಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಮೂರು ಜನ ಪುತ್ರಿಯರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಹಗರಟಗಿಯ ಗ್ರಾಮದ ಲಿಂಗಾಯತ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Be the first to comment