ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಹತ್ವದ ಚರ್ಚೆ : ರೂಪಾ ಶ್ರೀನಿವಾಸ್ ನಾಯಕ 

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

 

ರಾಯಚೂರು

CHETAN KENDULI

ಅಕ್ಟೋಬರ್ 22 : ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೇಸ್ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರನ್ನು ರೂಪಾ ಶ್ರೀನಿವಾಸ್ ನಾಯಕ ರವರು ಭೇಟಿ ಮಾಡಿ ಮಹತ್ವದ ವಿಷಯಗಳ ಕುರಿತು ಚರ್ಚೆ.ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರನ್ನು ರೂಪಾ ಶ್ರೀನಿವಾಸ್ ನಾಯಕ ರವರು ಇಂದು ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿ ರಾಜಕೀಯ ಆಡಳಿತ ಪಕ್ಷಗಳ ಬಗ್ಗೆ, NRBC ಕಾಮಗಾರಿಯೂ ತೀರಾ ಕಳಪೆ ಗುಣಮಟ್ಟದ್ದು ಆಗಿದ್ದು,ಸರಕಾರದ ಹಣ ಸುಖಾಸುಮ್ಮನೆ ದುಂದು ವೆಚ್ಚವಾಗುತ್ತಿದೆ ಆದ್ದರಿಂದ ಈ ವಿಷಯದ ಕುರಿತು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಪರ ಧ್ವನಿ ಎತ್ತಿ ಎಂದು ಒತ್ತಾಯಿಸಿದ್ದಾರೆ. ಹಾಗೂ ಈ ಭಾಗದ ಜನತೆಯ ಬಹು ನಿರೀಕ್ಷೆಯ ಕನಸು ಒಂದೇ AIIMS (ಏಮ್ಸ್) ನಮ್ಮ ಜಿಲ್ಲೆಗೆ ಮಂಜೂರು ಮಾಡಲೇಬೇಕು ಎನ್ನುವಂತಹದ್ದು, ಒಂದು ವೇಳೆ ಮಂಜೂರು ಮಾಡದೇ ಇದ್ದರೆ,ನಮ್ಮ ಕಲ್ಯಾಣ ಕರ್ನಾಟಕಕ್ಕೆ ಭಾರಿ ಅನ್ಯಾಯ ಮಾಡುವಂತಹದ್ದು, ಹಾಗಾಗಿ ಸರಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ ನಮ್ಮ ಹೋರಾಟಕ್ಕೆ ಬೆಂಬಲಿಸಿ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ರೂಪಾ ಶ್ರೀನಿವಾಸ್ ನಾಯಕ ರವರು ಸಿದ್ದರಾಮಯ್ಯ ರವರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ನಂತರ ಕುಟುಂಬ ಪರಿವಾರದೊಂದಿಗೆ ಸಿದ್ದರಾಮಯ್ಯರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿದ್ದಾರೆ.

Be the first to comment

Leave a Reply

Your email address will not be published.


*