ಚೆಸ್‌ ಪಂದ್ಯಾವಳಿ ಪ್ರಥಮ ಸ್ಥಾನ ಪಡೆದ ಬಿಪ್ಸ್ ಶ್ರೀಹರಿ ದೇಶಪಾಂಡೆ…!!!

ವರದಿ: ಶರಣಪ್ಪ ಹೇಳವರ, ಬಾಗಲಕೋಟ

ಜಿಲ್ಲಾ ಸುದ್ದಿಗಳು 

ಬಾಗಲಕೋಟೆ:

CHETAN KENDULI

ನಗರದ ವಿದ್ಯಾ ಗಿರಿ- ಕುಂದಾಪುರ್‌ನಲ್ಲಿ ಅಕ್ಟೋಬರ್ 15, 16 ರಂದು ಜರುಗಿದ 13 ರಿಂದ 15 ವರ್ಷದೊಳಗಿನವರ ಅಖಿಲ ಭಾರತ 1200 ರಿಂದ 1400 ಫಿಡೆ ಶ್ರೇಣಿಯ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ಪ್ರತಿಷ್ಠಿತ ಬಸವೇಶ್ವರ ಸಿ.ಬಿ. ಎಸ್‌.ಇ ಶಾಲೆಯ 9ನೇ ವರ್ಗ ದಲ್ಲಿ ಓದುತ್ತಿರುವ ಕುಮಾರ ಶ್ರೀಹರಿ ದೇಶಪಾಂಡೆ ತನ್ನ ಎದುರಾಳಿಯ ವಿರುದ್ಧ ಅಮೋ ಘ ಆಟ ಪ್ರದರ್ಶನ ನೀಡುವ ಮೂಲಕ ಮೊದಲ ಸ್ಥಾನವನ್ನು ಪಡೆದು ಪ್ರಶಸ್ತಿಪತ್ರ, 3500 ರೂ.ನಗದು ಬಹುಮಾನ ಹಾ ಗೂ ಆಕರ್ಷಕ ಟ್ರೋಫಿಯನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ.

ಶಾಲೆಯ ಪ್ರಾಚಾರ್ಯ ರಾದ ಸಿ.ಬಿ. ಸುರೇಶ ಹೆಗ್ಡೆ ಯವರುವಿದ್ಯಾರ್ಥಿ ಶ್ರೀಹರಿಗೆ ಪಾಲಕರ ಸಮ್ಮುಖದಲ್ಲಿ ಪ್ರಶಸ್ತಿಪತ್ರ, ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯ ನ್ನು ವಿತರಿಸಿದರು. ಸಾಧನೆಗೈದ ಕು. ಶ್ರೀಹರಿಗೆ ಕಾರ್ಯಾಧ್ಯಕ್ಷರೂ, ಸ್ಥಳೀಯ ಶಾಸಕರೂ ಆದ ಡಾ ವೀರಣ್ಣ ಸಿ. ಚರಂತಿಮಠ, ಶಾಲಾ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮ ಹಾಂತೇಶ ಶೆಟ್ಟರ್, ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ಶಾಲೆಯ ಪ್ರಾಚಾರ್ಯರಾದ ಸಿ.ಬಿ. ಸುರೇಶ ಹೆಗ್ಡೆ ಉಪಪ್ರಾಚಾರ್ಯರಾದ ಶ್ರೀಮತಿ ಮಂಗಳಗೌರಿ ಹೆಗ್ಡೆ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*