‌ಕುಂದಾಣ್ ಹೋಬಳಿ ಕ್ಯಾಂಟರ್, ದ್ವಿಚಕ್ರವಾಹನ ಡಿಕ್ಕಿ, ಓರ್ವ ಯುವಕ ಸಾವು

ವರದಿ ಹೈದರ್‌ಸಾಬ್

ರಾಜ್ಯ ಸುದ್ದಿ

CHETAN KENDULI

ದೇವನಹಳ್ಳಿ: ತಾಲೂಕಿನ ಐವಿಸಿ ರಸ್ತೆಯಲ್ಲಿ ಕ್ಯಾಂಟರ್ ವಾಹನ ಮತ್ತು ದ್ವಿಚಕ್ರವಾಹನ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ದ್ವಿಚಕ್ರವಾಹನ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಿಂಗರಹಳ್ಳಿ ಗ್ರಾಮದ ಯುವಕ ಸುಬ್ರಮಣಿ (೩೨) ಮೃತ ದುರ್ದೈವಿ.ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದ ನಿವಾಸಿ ಮಾರಪ್ಪ ಅವರ ಮಗ ಸುಬ್ರಮಣಿ ತನ್ನ ದ್ವಿಚಕ್ರವಾಹನದಲ್ಲಿ ಉಗನವಾಡಿ ಸರ್ಕಲ್‌ನಿಂದ ಐವಿಸಿ ರಸ್ತೆ ಮಾರ್ಗವಾಗಿ ಸಂಚರಿಸುವಾಗ ಸಿಂಗ್ರಹಳ್ಳಿ ಗ್ರಾಮದ ತಿರುವಿನಲ್ಲಿ ಅದೇ ಮಾರ್ಗದಲ್ಲಿ ತಿಂಡ್ಲು ಸರ್ಕಲ್ ಕಡೆಯಿಂದ ದೇವನಹಳ್ಳಿ ಕಡೆಗೆ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಏಕಾಏಕೀ ಡಿಕ್ಕಿ ಹೊಡೆದಿರುವ ಪರಿಣಾಮವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇದೇ ರಸ್ತೆಯಲ್ಲಿ ಯುವಕ ಸುಬ್ರಮಣಿ ಸಹೋದರನು ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದ ಎನ್ನಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ವಿಜಯಪುರ ವೃತ್ತ ನಿರೀಕ್ಷಕ ಶ್ರೀನಿವಾಸ್.ಟಿ, ವಿಶ್ವನಾಥಪುರ ಪೊಲೀಸ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಪೊಲೀಸರ ತಂಡ ಘಟನಾ ಸ್ಥಳವನ್ನು ಪರಿಶೀಲಿಸಿದರು. ಪೊಲೀಸರು ಕ್ಯಾಂಟರ್ ಅನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ಚಿತ್ರ:ದೇವನಹಳ್ಳಿ ತಾಲೂಕಿನ ಐವಿಸಿ ರಸ್ತೆಯಲ್ಲಿ ಕ್ಯಾಂಟರ್ ಮತ್ತು ದ್ವಿಚಕ್ರವಾಹನ ಅಪಘಾತದಲ್ಲಿ ಯುವಕ ಮೃತಪಟ್ಟಿರುವ ಸ್ಥಳದಲ್ಲಿ ಜಮಾಯಿಸಿರುವ ಜನರು. ಚಿತ್ರ: ೨೫ ಕುಂದಾಣ ೪ಮೃತಪಟ್ಟಿರುವ ಯುವಕ ಸುಬ್ರಮಣಿ (೩೨) ಭಾವಚಿತ್ರ

Be the first to comment

Leave a Reply

Your email address will not be published.


*