ಎಸ್.ಆರ್ ಶ್ರೀನಿವಾಸ್ ಸೋಲಿಸಲು ಕುಮಾರಸ್ವಾಮಿ ಬೇಕಾಗಿಲ್ಲ ಗುಬ್ಬಿ ಜೆಡಿಎಸ್ ಅಭ್ಯರ್ಥಿ ನಾಗರಾಜು ಸಾಕು…_ಆರ್.ಸಿ ಆಂಜನಪ್ಪ

ವರದಿ _ಮಾರುತಿ ಪ್ರಸಾದ್ ತುಮಕೂರು

ರಾಜ್ಯ ಸುದ್ದಿಗಳು 

ತುಮುಕೂರು 

ತುಮಕೂರು_ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ರವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರ ಬಗ್ಗೆ ತೀವ್ರ ಲಘುವಾಗಿ ಮಾತನಾಡಿದ್ದು ಅವರ ಹೇಳಿಕೆಗಳನ್ನು ಖಂಡಿಸುವುದಾಗಿ ತುಮಕೂರು ಜೆಡಿಎಸ್ ಘಟಕದ ಜಿಲ್ಲಾಧ್ಯಕ್ಷ ಆರ್.ಸಿ ಆಂಜಿನಪ್ಪ ತಿಳಿಸಿದ್ದಾರೆ.ಇನ್ನು ನೆನ್ನೆ ಜೆಡಿಎಸ್ ಪಕ್ಷದ ವತಿಯಿಂದ ಎಸ್.ಆರ್ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಇನ್ನು ಎಸ್.ಅರ್ ಶ್ರೀನಿವಾಸರವರು ಜೆಡಿಎಸ್ ಪಕ್ಷದ ವತಿಯಿಂದ ಶಾಸಕರಾಗಿದ್ದು ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರು ಅದೆಲ್ಲವನ್ನು ಶ್ರೀನಿವಾಸ್ ಮರೆತಿದ್ದಾರೆ.

CHETAN KENDULI

 

ಇನ್ನು ಗುಬ್ಬಿ ತಾಲೂಕಿಗೆ ಕುಮಾರಸ್ವಾಮಿ ರವರನ್ನು ಬಂದು ಚುನಾವಣೆಗೆ ನಿಲ್ಲಲು ಸವಾಲು ಹಾಕಿದ್ದು ಈಗಾಗಲೇ ಗುಬ್ಬಿ ತಾಲೂಕಿಗೆ ಜೆಡಿಎಸ್ ಪಕ್ಷದ ವತಿಯಿಂದ ನಾಗರಾಜು ರವರನ್ನು ಅಂತಿಮಗೊಳಿಸಲಾಗಿದ್ದು ಅವರ ಹೆಸರನ್ನು ಕುಮಾರಸ್ವಾಮಿ ರವರು ಅಂತಿಮಗೊಳಿಸಿದ್ದಾರೆ ಇನ್ನು ಎಸ್ ಆರ್ ಶ್ರೀನಿವಾಸ್ ರವರು ನಾಗರಾಜ್ ರವರನ್ನು ಗೆದ್ದು ತೋರಿಸಲಿ ಶ್ರೀನಿವಾಸ್ ಅವರನ್ನು ಸೋಲಿಸಲು ನಾಗರಾಜ್ ಸಾಕು ಇನ್ನು ಮುಂಬರುವ ಚುನಾವಣೆಯಲ್ಲಿ ಬಿ.ಎಸ್ ನಾಗರಾಜುಅವರು ಗೆದ್ದು ಬರುತ್ತಾರೆ ಅವರನ್ನು ತಡೆಯಲು ನಿಮ್ಮಿಂದ ಆಗುತ್ತಾ ಎಂದಿರುವ ಅವರು ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಬಂಧ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.ಇನ್ನು ಅವರ ಹೇಳಿಕೆಗಳು ಇತ್ತೀಚಿನ ಬೆಳವಣಿಗೆಯ ಬಗ್ಗೆ ಶೀಘ್ರದಲ್ಲೇ ಜಿಲ್ಲೆಯ ಮಾಜಿ ಹಾಲಿ ಶಾಸಕರು ಕಾರ್ಯಕರ್ತರ ನೇತೃತ್ವದಲ್ಲಿ ಸಭೆ ನಡೆಸಿ ಗುಬ್ಬಿಯಲ್ಲಿ ಬೃಹತ್ ಸಮಾವೇಶವನ್ನು ನಡೆಸಿ ತಕ್ಕ ಉತ್ತರ ನೀಡಲಿದ್ದೇವೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*