ಮೇಕೆದಾಟು ಪಾದಯಾತ್ರೆಗೆ ದೇವನಹಳ್ಳಿ ವಿಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ವಿಧಾನಸಭಾ ಕ್ಷೇತ್ರದಿಂದ ಮಾ.1ರಂದು ಮೇಕೆದಾಟು ಪಾದಯಾತ್ರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಯಶಸ್ವಿಗೊಳಿಸಲು ಮುಖಂಡರ ಪೂರ್ವ ಭಾವಿ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗುವುದರ ಮೂಲಕ ಕ್ಷೇತ್ರದ ಎಲ್ಲಾ ಬ್ಲಾಕಿನ ಅಧ್ಯಕ್ಷರ ಸಮೇತ ಮಾ.೧ರಂದು ದೇವನಹಳ್ಳಿ ಕ್ಷೇತ್ರದಿಂದ ಬೆಳಿಗ್ಗೆ 7ಗಂಟೆಯಿಂದ ಇಲ್ಲಿಂದ ಹೊರಡು ಕೆಂಗೇರಿಯಿಂದ ಪಾದಯಾತ್ರೆಗೆ ಮುಂದಾಗುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಮಾಜಿ ಶಾಸಕರಾದ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್, ಉಪಾಧ್ಯಕ್ಷ ಶಾಂತಕುಮಾರ್, ಚೌಡಪ್ಪನಹಳ್ಳಿ ಎಂ.ಲೋಕೇಶ್, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ಕೆಸಿ ಮಂಜುನಾಥ್, ಚಿನ್ನಪ್ಪ, ಚೇತನ್‌ಗೌಡ, ಕೆ.ಆರ್.ನಾಗೇಶ್, ಸುಧಾಕರ್, ನಾಗೇಗೌಡ, ವಿ.ನಾರಾಯಣಸ್ವಾಮಿ, ನವೀನ್‌ಕುಮಾರ್, ಸಾಗರ್, ಅಲ್ಪಸಂಖ್ಯಾತ ಮುಖಂಡ ಸಜ್ಜಾದ್, ಮೂರು ಬ್ಲಾಕ್‌ನ ಅಧ್ಯಕ್ಷರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು. 

Be the first to comment

Leave a Reply

Your email address will not be published.


*