ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೇರಿಕೆ ಖಂಡಿಸಿ ಸೈಕಲ್ ಜಾಥಾ.

ವರದಿ - ಶ್ರೀಕಾಂತ್ ಎಸ್ ಎಮ್

ರಾಜ್ಯ ಸುದ್ದಿ 

CHETAN KENDULI

 

ಜಿಲ್ಲಾ ಕಾಂಗ್ರೇಸ್ ಕಚೇರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪದೇ ಪದೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೇರಿಸುವುದರ ವಿರುದ್ಧ ಸೈಕಲ್ ಜಾಥವನ್ನು ಹಮ್ಮಿಕೊಂಡು ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆ ಹಾಗೂ ಗಂಗಮನ ಗುಡಿ ರಸ್ತೆ ಹಾಗೂ ಮ್ ಜಿ ರಸ್ತೆಯ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಟಿ.ಬಿ ಜಯಚಂದ್ರ ಪ್ರತಿಭಟನೆಯನ್ನು ಉದ್ದೇಶಿಸಿ ಇಂಧನದ ಬೆಲೆ ಪದೇ ಪದೇ ಕಾರಣ ವಿಲ್ಲದೆ ಹೇರಿಸುತಿದ್ದು ಜನಸಾಮಾನ್ಯರನ್ನು ಸುಲಿಗೆ ಮಾಡುತಿದ್ದರೆ, ತೆರಿಗೆಯ ಬಗ್ಗೆ ಹರಿವೇ ಇಲ್ಲದೆ ಕುರುಡು ಕುರುಡಾದ ನೀತಿಗಳ್ಳನ್ನು ಹೇರಿ ಜನರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಯುವ ಮುಖಂಡ ವಿನಯ್ ಶ್ಯಾಮ್ , ವಿಧಾನಸಬಾ ಯುವ ಮುಖಂಡ ಕೆ ಎನ್ ರಘು, ಹಿರಿಯ ಸಮಾಜ ಸೇವಕ ಯಲುವಳ್ಳಿ ರಮೇಶ್ , ಮಹಿಳಾಮುಖಂಡರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸುಮಿತ್ರಮ್ಮ ,ರಾಜ್ಯ ಕಾಂಗ್ರೆಸ್ ಮಹಿಳಾಮುಖಂಡರಾದ ಮಮತಾಮೂರ್ತಿ, ರಾಮಕೃಷ್ಣ, ಅಡ್ಡಗಲ್ ಶ್ರೀಧರ್, ಮುದಾಸೀರ್ ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.

Be the first to comment

Leave a Reply

Your email address will not be published.


*