ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿಕೆ ಖಂಡನಿಯ: ಮಂಜುನಾಥ್ ಛಲವಾದಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

 

ಮುದ್ದೇಬಿಹಾಳ:

ವಿಜಯಪುರ ಲೋಕಸಭಾ ಸದಸ್ಯರು ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ 15 ಲಕ್ಷ ಬಹುಮಾನ ಮೋದಿ ನಮ್ಮ ಖಾತೆಗೆ ಹಾಕಿದ ನಂತರ ಕೊಡಲಾಗುವುದು ಎಂದು ಪ್ರಕಟಣೆ ನೀಡಿರುವ ಕಾಂಗ್ರೆಸ್ ಮುಖಂಡ ಸದ್ದಾಂ ಕುಂಟೋಜಿ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಎಸ್ ಸಿ ಮೋರ್ಚಾ ತೀವ್ರವಾಗಿ ಖಂಡಿಸುತ್ತಿದೆ ಎಂದು ಎಸ್ ಸಿ ಮೋರ್ಚಾ ತಾಲೂಕ ಅಧ್ಯಕ್ಷ ಮಂಜುನಾಥ್ ಛಲವಾದಿ ಪ್ರಕಣೆಯಲ್ಲಿ ತಿಳಿಸಿದ್ದಾರೆ.


CHETAN KENDULI


ಕಳೆದ ಎರಡು ತಿಂಗಳಿಂದ ಮಾನ್ಯ ಸಂಸದರು ಅನಾರೋಗ್ಯಕ್ಕೆ ಇದಾಗಿದ್ದು ಮನೆಯಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ. ಕಾರಣ ಮನೆಯಲ್ಲೇ ಇದ್ದು ತಮ್ಮ ಆಪ್ತ ಸಹಾಯಕ ಹಾಗೂ ಜೇಷ್ಠ ಪುತ್ರನ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಜಿಲ್ಲಾ ಅಧಿಕಾರಿಗಳ ಸಭೆ ಕರೆದು ಕೋವಿಡ್ ವಿರುದ್ದ ಹೊರಡಲು ಏನು ಮಾಡಬೇಕು ಎಂದು ಚರ್ಚಿಸಿ ಸೂಕ್ತ ಸಲಹೆ ನೀಡುತ್ತಿದ್ದಾರೆ. ಇಂತಹ ಪರಸ್ಥಿಯಲ್ಲಿ ಸದ್ದಾಂ ಕುಂಟೋಜಿ ರಾಜಕೀಯ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಯಾಗಿದೆ. ಮಾನ್ಯ ಸಂಸದರ ರಾಜಕೀಯ ಅನುಭವದಷ್ಟು ವಯಸ್ಸು ಆಗದವರು ಅವರ ವ್ಯಕ್ತಿತ್ವ ತೇಜೋವದೆ ಮಾಡಲು ಹೊರಟಿದ್ದಾರೆ. ಕಳೆದ ಇಪ್ಪತ್ತು ವರ್ಷದಲ್ಲಿ ಮಾನ್ಯ ಸಂಸದರು ಜಿಲ್ಲೆಗೆ ಏನು ಮಾಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ. ಬೇರೊಬ್ಬರ ಕಡೆ ಬೆರಳು ಮಾಡುವ ಕಾಂಗ್ರೆಸ್ ನವರು ಮುದ್ದೇಬಿಹಾಳ್ ತಾಲೂಕಿನಲ್ಲಿ ಏನು ಮಾಡಿದ್ದಾರೆ ಕೋವಿಡ್  ಸಮಯದಲ್ಲಿ ಬಡವರಿಗೆ ಇವರಿಂದ ಏನು ಸಹಾಯ ಆಗಿದೆ ಎಂದು ಪ್ರಶ್ನಿಸಿದ್ದಾರೆ.

Be the first to comment

Leave a Reply

Your email address will not be published.


*