ಶ್ರೀ ಪದ್ಮಾವತಿ ದೇವಸ್ಥಾನ ಕಮೀಟಿ ಸದಸ್ಯ, ದಿಗಂಬರ ಜೈನ್ ಸಮಾಜದ ಹಿರಿಯ ಪದ್ಮರಾಜ ದಂಡಾವತಿ ನಿಧನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಪಟ್ಟಣದ ದಿಗಂಬರ ಜೈನ್ ಸಮಾಜದ ಹಿರಿಯ, ಶ್ರೀ ಪದ್ಮಾವತಿ ದೇವಸ್ಥಾನ ಕಮೀಟಿ ಸದಸ್ಯ, ದಂಡಾವತಿ ಹಾರ್ಡವೇರ ಅಂಗಡಿಯ ಮಾಲಿಕರಾದ ಪದ್ಮರಾಜ ದಂಡಾವತಿ (85) ರವಿವಾರ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರರಿಗೆ ಇಬ್ಬರು ಪುತ್ರರು, ಮೂರು ಜನ ಪುತ್ರಿಯರು ಹಾಗೂ ಮೊಮ್ಮಕ್ಕಳು ಇದ್ದಾರೆ.

ಸಂತಾಪ ಚೂಚನೆ:

ಮೃತರರ ಕುಟುಂಬಕ್ಕೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ, ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರದೇವರು, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕ್ರೀಯೇಟಿವ್ ಫ್ರೇಂಡ್ಸ್ ಗ್ರೂಪ್, ಆರ್.ಎಂ.ಕೆ. ಟ್ರಸ್ಟ್, ಜ್ಞಾನ ಭಾರತಿ ವಿದ್ಯಾ ಮಂದಿರದ ಆಡಳಿತ ಮಂಡಳಿ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.

Be the first to comment

Leave a Reply

Your email address will not be published.


*