ದೇವರಹಳ್ಳಿ:108ನಲ್ಲಿ ಹೆರಿಗೆ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ…!!!

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

CHETAN KENDULI

ಬಳ್ಳಾರಿ:

108 ಸಿಬ್ಬಂದಿಗಳಾದ ಶುಶ್ರೂಷಕ ಶಿವಶಂಕರ ಹಾಗೂ ಚಾಲಕ ತಿಪ್ಪೇಸ್ವಾಮಿ ಆಸ್ಪತ್ರೆ ಮಾರ್ಗದ ಮದ್ಯದಲ್ಲಿಯೇ ತೀವ್ರ ಹೆರಿಗೆ ನೋವು ಕಂಡಕ್ಷಣ ಆಂಬುಲೆನ್ಸ್ ನಲ್ಲೆ ಸಹಜ ಹೆರಿಗೆ ಮಾಡಿದ್ದು ಪ್ರಸಂಶೇಗೆ ಪಾತ್ರರಾಗಿದ್ದಾರೆ.

ಜಿಲ್ಲೆಯ ಸಂಡೂರು ತಾಲ್ಲೂಕಿನ ದೇವರಹಳ್ಳಿ ಗ್ರಾಮದಿಂದ,108 ಆಂಬುಲೆನ್ಸ್ ನಲ್ಲಿ ಗುಡೆಕೋಟೆ ಆಸ್ಪತ್ರೆಗೆ ಹೋಗುವ ಮಾರ್ಗ‌ ಮದ್ಯದಲ್ಲಿ ಶಶಿಕಲಾ ಗಂಡ ಕೃಷ್ಣ ಎಂಬ ಮಹಿಳೆಗೆ ಗಂಡು ಮಗುವಿನ ಜನನವಾಯಿತು.

108 ಗುಡೆಕೋಟೆ ಆಂಬುಲೆನ್ಸ್ ಸಿಬ್ಬಂದಿಗಳಾದ ಶುಶ್ರೂಷಕ ಶಿವಶಂಕರ್ ಹಾಗೂ ಚಾಲಕ ತಿಪ್ಪೇಸ್ವಾಮಿ ಇವರು, ಶಶಿಕಲಾ ಅವರಿಗೆ ಮಾರ್ಗ ಮಧ್ಯದಲ್ಲಿ ಸಹಜ ಹೆರಿಗೆ ಮಾಡಿಸಿದ್ದಾರೆ.

ನಂತರ ಗುಡೆಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ,ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

Be the first to comment

Leave a Reply

Your email address will not be published.


*