ಸ್ವಾಮಿಜಿಗಳು ಜಾತಿಗೆ ಸೀಮಿತರಾಗದೇ ಭಾರತ ದೇಶದ ಧರ್ಮ ಉಳಿಸುವಂತಾಗಲಿ: ವಿಶ್ರಾಂತ ನ್ಯಾ.ಅರಳಿ ನಾಗರಾಜ…! ಮುದ್ದೇಬಿಹಾಳಲ್ಲಿ ಯಶಸ್ವಿಯಾದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:

ದೇವರನ್ನು ಒಲಿಸಿಕೊಳ್ಳಬಹುದು ಆದರೆ ನಿಜವಾದ ಮನುಷ್ಯ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ವಿವಿಧ ಕೇತ್ರಗಳಲ್ಲಿ ಸಾಧನೆಗೈದ ಸಾಧಕರ ಸಾಧನೆ ನಿಜಕ್ಕೂ ಶ್ಲಾಘನಿಯ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.


CHETAN KENDULI


ಪಟ್ಟಣದ ಹುಡ್ಕೋ ಬಡಾವಣೆಯ ಡಾ, ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ ಹಾಗೂ ವಿಜಯಪುರ ಜಿಲ್ಲಾ, ತಾಲೂಕಾ ಘಟಕದ ವತಿಯಿಂದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಮಟ್ಟದ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಭಾರತ ವಿವಿಧ ಸಂಸ್ಕೃತಿ, ಪರಂಪರೆಯನ್ನು ಧಾರ್ಮಿಕ ಪದ್ದತಿಯನ್ನು ಹೊಂದಿದ ಶ್ರೇಷ್ಟವಾದ ದೇಶ ಹಾಗಾಗಿಯೇ ಇಲ್ಲಿ ಸಾಕಷ್ಟು ಜನ ಇಡಿ ವಿಶ್ವವೇ ಹೆಮ್ಮೇ ಪಡುವಂತೆ ಭಾರತದ ಕಿರ್ತೀಯನ್ನು ಬೆಳಗಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಯುವ ಸಮೂಹ ಯುವ ಸಂಘಟನೆಗಳು ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ಮೂಲಕ ದೇಶಾಭಿಮಾನ ಹೊಂದಬೇಕು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್ ಬಾಲಾಜಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದಂದು ರಾಜ್ಯ ಸರಕಾರದಿಂದಲೇ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೇ ಕೆಲವು ವರ್ಷಗಳಿಂದ ಪ್ರಸ್ತುತ ರಾಜ್ಯ ಸರಕಾರ ಈ ಪ್ರಶಸ್ತಿ ನೀಡುವುದನ್ನು ನಿಲ್ಲಿಸಿದ್ದರಿಂದಾಗಿ ಯುವ ಶಕ್ತಿಗೆ ಸ್ಪೂರ್ತಿ ದೊರಕದಂತಾಗಿದೆ. ಕಾರಣ ಮುಂದಿನ ವರ್ಷದಿಂದಾದರೂ ಸರಕಾರದಿಂದ ಸ್ವಾಮಿವಿವೇಕಾನಂದ ಸದ್ಭಾವನಾ ಪ್ರಶಸಿ ನೀಡಿ ಗೌರವಿಸುವ ಮೂಲಕ ಯುವ ಸಮೂಹಕ್ಕೆ ಚೈತನ್ಯ ತುಂಬುವ ಕಾರ್ಯ ಮಾಡಬೇಕಿದೆ ಎಂದರು.
ಈ ವೇಳೆ ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಮಹಾಸ್ವಾಮಿಗಳು, ಬಾಗಲಕೋಟ ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ದೇವರು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು, ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ, ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ ಬಿ ನಾವದಗಿ, ಅಹಿಲ್ಯಾಬಾಯಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ, ಅಶೋಕ ಲಿಂಬಾವಳಿ, ಗಿರೀಶಗೌಡ ಪಾಟೀಲ, ಬಸರಕೋಡ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ(ಚಿನ್ನು) ನಾಡಗೌಡ, ಪಿಎಸೈ ಮಲ್ಲಪ್ಪ ಮಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಸೇರಿದಂತೆ 30 ಜಿಲ್ಲೆಗಳಿಂದ ಆಗಮಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.ಹಾಸ್ಯ ಕಲಾವಿಧ ಗೋಪಾಲ ಹೂಗಾರ ನಿರೂಪಿಸಿದರು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಸ್ವಾಗತಿಸಿದರು.

“ಇಂದು ಜಾತಿಗೊಂದು ಸ್ವಾಮಿಜಿಗಳು ಸೀಮಿತಗೊಳ್ಳುತ್ತಿರುವುದರಿಂದ ನಿಜವಾದ ನಮ್ಮ ದೇಶದ ಸಂವಿದಾನದ ಅರಿತುಕೊಳ್ಳದೇ ದೇಶದ ಸಂವಿದಾನಕ್ಕೆ ಪ್ರಜಾಪ್ರಭುತ್ವದ ಮೇಲೆ ಚುನಾಯಿತಗೊಂಡು ಶಾಸಕರ ಬೆಂಬಲದ ಮೇಲೆ ಆಯ್ಕೆಗೊಂಡ ಮುಖ್ಯಮಂತ್ರಿಗಳಿಗೆ ಇಂದಿನ ಸ್ವಾಮಿಜಿಗಳ ನಮ್ಮ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ನಮ್ಮ ಸಮಾಜ ತಮಗೇ ಸಂಪೂರ್ಣ ವಿರೋಧಿಸಿ ತಾವು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಪತ್ರಿಕೆಗಳ ಮೂಲಕ ಅವಾಜ್ ಹಾಕುವ ಕೆಲವು ಇಂದಿನ ಸ್ವಾಮಿಜಿಗಳ ನಡೆಯಿಂದಾಗಿ ನಿಜವಾದ ಭಾರತ ದೇಶದ ಸಂವಿದಾನಕ್ಕೆ ಗೌರವ ದೊರದಂತಾಗಿದೆ. ಹಾಗಾಗಿ ಮಠಾಧಿರ್ಶವರು ಸ್ವಾಮಿಗಳು ದೇಶದ ಧರ್ಮ, ಆಚಾರ ವಿಚಾರ, ಸಂಸ್ಕೃತಿ ಮತ್ತು ಸಂವಿದಾನ ಉಳಿಸಿ ಬೆಳೆಸುವ ಮೂಲಕ ರಕ್ಷಣೆಗೆ ಎಲ್ಲ ಜಾತಿ ಧರ್ಮದ ಸ್ವಾಮಿಜಿಗಳು ಒಗ್ಗಟ್ಟಾಗಿ ಮುಂದಾಗಬೇಕು.”
-ಅರಳಿ ನಾಗರಾಜ, ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ.

Be the first to comment

Leave a Reply

Your email address will not be published.


*