ಅಂಬಿಗರ ಚೌಡಯ್ಯ ಸಮುದಾಯ ಭವನ ನಿಮಿ೯ಸಲು ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ಕೋಲಿ ಸಮಾಜದಿಂದ ಎಚ ಕೆ ಪಾಟೀಲರಿಗೆ ಮನವಿ.

ಗದಗ : ಗದಗ ಜಿಲ್ಲಾ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯ ಸಮಾಜ ಟ್ರಸ್ಟ್ ವತಿಯಿಂದ ಗದಗ ಮತಕ್ಷೇತ್ರದ ಶಾಸಕರಾದ ಡಾ ಎಚ್ ಕೆ ಪಾಟೀಲ ಅವರಿಗೆ ನಿಜ ಶರಣ ಅಂಬಿಗರ ಚೌಡಯ್ಯ ಸಮಾಜ ಸಮುದಾಯ ಭವನ ನಿಮಿ೯ಸಲು ಭೂಮಿ / ಜಾಗೆಯನ್ನು ಮಂಜೂರ ಮಾಡಲು ಮನವಿ ಸಲ್ಲಿಸಲಾಯಿತು. ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷರಾದ ಗುರಪ್ಪ ತಿಲಾ೯ಪುರ ಹಾಗೂ ಸಮಾಜದ ಜಿಲ್ಲಾಧ್ಯಕ್ಷರಾದ ರಾಮಣ್ಣ ಇರಕಲ್ಲ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.


           ಕೋಲಿ ಸಮಾಜ ಮುಖಂಡರು


ಈ ಸಂದರ್ಭದಲ್ಲಿ ಸಮಾಜ ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಸಂಗಮೇಶ ಹಾದಿಮನಿ. ಗದಗ ಬೆಟಗೇರಿ ಶಹರ ಘಟಕ ಅಧ್ಯಕ್ಷ ಹೇಮಂತ ದಳವಾಯಿ .ಸಮಾಜದ ಮಹಿಳಾ ಘಟಕ ಅಧ್ಯಕ್ಷಿಣಿ ಶ್ರೀಮತಿ ಸುಜಾತಾ ಬಸವರಾಜ ಗುಡಿಸಾಗರ.ಕವಿತಾ ಗುಡಿಸಾಗರ.ಶಿವದೇವ ಹಾದಿಮನಿ ಸಮಾಜ ಭಾಂಧವರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*