ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದೊಂದಿಗೆ ಹುಟ್ಟುಹಬ್ಬದ ಆಚರಣೆ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಸದಾ ಸಮಾಜಮುಖಿ ಜನಪರ ಕಾರ್ಯಗಳನ್ನು ಮಾಡುತ್ತಿರುವ ಪ್ರಸನ್ನ ಫೌಂಡೇಶನ್ಸ್ ನ ಸಂಸ್ಥಾಪಕರಾದ ಪ್ರಸನ್ನ ಪಿ ಗೌಡ ರವರ 43ನೇ ಹುಟ್ಟುಹಬ್ಬದ ಆಚರಣೆಯನ್ನು ಇಂದು ಪ್ರಸನ್ನ ಪಿ ಗೌಡ ರವರ ಅಭಿಮಾನಿ ಬಳಗದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆಯೋಜಿಸಲಾಗಿತ್ತು. ಹುಟ್ಟುಹಬ್ಬದ ಆಚರಣೆ ವಿಶೇಷವಾಗಿದ್ದು. ಅಭಿಮಾನಿಗಳು ರಕ್ತದಾನ ಮಾಡುವ ಮುಖಾಂತರ ತಮ್ಮ ನೆಚ್ಚಿನ ನಾಯಕ ಪ್ರಸನ್ನ ಪಿ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

CHETAN KENDULI

ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜನತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ವಿಶೇಷ ಆಹ್ವಾನಿತರನ್ನಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವಿಶೇಷ ಉಡುಗೊರೆ ನೀಡುವ ಮುಖಾಂತರ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಪಿ ಗೌಡ ರವರು ತಾಲ್ಲೂಕಿನ ಜನತೆಯ ಪ್ರೀತಿಗೆ ಸದಾ ಚಿರಋಣಿ ನಮ್ಮ ತಂಡದ ಜನಪರ ಕಾರ್ಯಗಳು ಸದಾ ಹೀಗೆ ಮುಂದುವರೆಯುತ್ತದೆ ನಿಮ್ಮ ಸಹಕಾರ ಮತ್ತು ಸಲಹೆ ಸದಾ ಹೀಗೆ ಇರಲಿ ಎಂದು ಮನವಿ ಮಾಡಿದರು ಹಾಗೂ ಈ ಹುಟ್ಟು ಹಬ್ಬದಿಂದ ನನ್ನ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಮುಂದಿನ ದಿನಗಳಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ಪ್ರಸನ್ನ ಫೌಂಡೇಶನ್ ತಂಡ ಮುಂದಾಗುತ್ತದೆ ಎಂದು ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವು ಸಂಘಟನೆಗಳ ಮುಖಂಡರು, ಸಮಾಜ ಪರ ಹೋರಾಟಗಾರರು ,ಯುವ ನಾಯಕರು , ಸ್ಥಳಿಯ ಮುಖಂಡರು ಪ್ರಸನ್ನ ಪಿ ಗೌಡ ರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ದಾನಿಗಳಿಗೆ ಹೆಲ್ಮೆಟ್ ನೀಡುವ ಮುಖಾಂತರ ದಾನಿಗಳಿಗೆ ಹೆಲ್ಮೆಟ್ ಧರಿಸುವುದರ ಉಪಯೋಗಗಳನ್ನು ತಿಳಿಯಲಾಯಿತು ಹಾಗೂ ವಾಹನ ಚಲಾಯಿಸುವ ಸಂದರ್ಭದಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಬೆಳೆಸಲು ಮನವಿ ಮಾಡಲಾಯಿತುಕಾರ್ಯಕ್ರಮದಲ್ಲಿ ಪ್ರಸನ್ನ ಫೌಂಡೇಶನ್ ಸದಸ್ಯರು, ಪದಾಧಿಕಾರಿಗಳು, ಅಭಿಮಾನಿಗಳು, ತಾಲ್ಲೂಕಿನ ಜನತೆ ,ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*