ಒಂದು ಓಟಿಗೆ 75000 ಜೊತೆಯಲಿ ತಿರುಪತಿ ತಿಮ್ಮಪ್ಪ ಲಡ್ಡು ಫ್ರೀ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳ ವಿಧಾನಪರಿಷತ್ ಚುನಾವಣೆ ಭರದಿಂದ ಸಾಗುತ್ತಿದ್ದು ಹಣದ ಹೊಳೆಯೇ ಹರಿಯುತ್ತಿದೆ ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ಮುಂಚೂಣಿಯಲ್ಲಿದ್ದುಪ್ರತಿ ಸದಸ್ಯರು ಆಯ್ಕೆಯಾದ ಸಮಯದಲ್ಲಿ ನೀಡಿದ್ದ ಪ್ರಮಾಣಪತ್ರವನ್ನು ಪರಿಶೀಲಿಸಿದ ನಂತರ ತಲಾ ಒಂದು ಓಟಿಗೆ 75000 ರೂಪಾಯಿಗಳನ್ನು ನೀಡುವುದರ ಜೊತೆ ಜೊತೆಯಲ್ಲಿ ತಿರುಪತಿ ತಿಮ್ಮಪ್ಪ ಲಡ್ಡು ಮತ್ತು ಫೋಟೋವನ್ನು ನೀಡಲಾಗಿದೆ ಅಷ್ಟೇ ಅಲ್ಲದೆ ತಿರುಪತಿ ತಿಮ್ಮಪ್ಪನ ಫೋಟೋ ಮೇಲೆ ಆಣೆ ಪ್ರಮಾಣವನ್ನು ಕೂಡ ಮಾಡಿಸಿಕೊಳ್ಳಲಾಗಿದೆ.

CHETAN KENDULI

 

 ಬಾಗೇಪಲ್ಲಿ ಸಮೀಪದ ಪರಗೋಡು ಬಳಿಯಿರುವ ರಾಷ್ಟ್ರೀಯ ಪಕ್ಷವೊಂದರ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಿಗೆ ಸೇರಿದ ಫಾರಂ ಹೌಸಿನಲ್ಲಿ ಬೆಳಗಿನಿಂದಲೇ ಹಣ ವಿತರಿಸುವ ಜಾತ್ರೆ ನಡೆಯಿತು. ಹಣ ಪಡೆದ ಗ್ರಾಮ ಪಂಚಾಯಿತಿ ಸದಸ್ಯರು ಸದಸ್ಯೆಯರು ಇನ್ನಿತರೆ ಸ್ಥಳೀಯ ಮತದಾರರಿಂದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಫೋಟೋ ಮೇಲೆ ಪ್ರಮಾಣ ಮಾಡಿರುವ ವಿಡಿಯೋ ವೈರಲ್ ಆಗಿದೆ ಈ ವಿಡಿಯೋದಲ್ಲಿ ಮೂರನೇ ಕ್ರಮ ಸಂಖ್ಯೆಯ ವೇಣುಗೋಪಾಲ್ ಎಂಬ ವ್ಯಕ್ತಿಗೆ ಮತಹಾಕಿ ಗೆಲ್ಲಿಸುವೆ ಎಂದು ಪ್ರಮಾಣ ಮಾಡಿಕೊಳ್ಳಲಾಗುತ್ತದೆ

 ಈ ವಿಡಿಯೋ ನೋಡಿದ ಸ್ಥಳೀಯ ಸರ್ವಜನಿಕರು ಶ್ರದ್ಧಾ ಕೇಂದ್ರಗಳು ಮತ್ತು ನಂಬಿಕೆಯ ತಾಣವಾಗಿರುವ ದೇವರು, ದೇವಸ್ಥಾನಗಳನ್ನೇ ಹಣ ವಿತರಣೆ ಮತ್ತು ಚುನಾವಣೆ ಗೆಲ್ಲಲು ಬಳಕೆ ಮಾಡಿಕೊಳ್ಳುತ್ತಿರುವ ಇವರ ವರ್ತನೆ ಖಂಡನೀಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ

Be the first to comment

Leave a Reply

Your email address will not be published.


*