ಲಿಂಗಸ್ಗೂರು ಬಂದ್ ಕರೆಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲ: ಕುಣಿಕೆಲ್ಲೂರು

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ದಲಿತ ಸಮುದಾಯದ ಬೈಲಪ್ಪ (ಮಾದಿಗ) ಇವರ ಮೇಲಿನ ದೌರ್ಜನ್ಯ ಖಂಡಿಸಿ ನವೆಂಬರ್ 29 ರಂದು ದಲಿತ ಪರ ಸಂಘಟನೆಗಳ ವತಿಯಿಂದ ಲಿಂಗಸುಗೂರ ಬಂದ್ ಗೆ ಕರೆ ನೀಡಲಾಗಿದೆ. ದಲಿತ ಪರ ಸಂಘಟನೆಗಳ ಬಂದ್ ಕರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಸ್ಕಿ ತಾಲೂಕ ಘಟಕದ ವತಿಯಿಂದಲೂ ಸಂಪೂರ್ಣ ಬೆಂಬಲ ಇದೆ ಎಂದು ಯಲ್ಲಾಲಿಂಗ ಕುಣಿಕೆಲ್ಲೂರ್ ಇವರ ನೇತೃತ್ವದಲ್ಲಿ ನಡೆಸಲಾದಂತಹ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ಪತ್ರಿಕಾ ಹೇಳಿಕೆ ನೀಡಿದರು.

CHETAN KENDULI

ಇದೇ ಸಂದರ್ಭದಲ್ಲಿ  ಯಲ್ಲಾಲಿಂಗ ಕುಣಿಕೆಲ್ಲೂರು ಕ.ದ.ಸಂ.ಸ ತಾಲೂಕ ಅಧ್ಯಕ್ಷರು ಮಸ್ಕಿ, ಅನಿಲ್ ಕುಮಾರ್ ಕ.ದ.ಸಂ.ಸ ತಾಲೂಕ ಉಪಾಧ್ಯಕ್ಷರು, ಮರಿಸ್ವಾಮಿ ಮುದಬಾಳ ಪ್ರಧಾನ ಕಾರ್ಯದರ್ಶಿ, ಶರಣ ಬಸವ ಬೇಡರ ಕಾರಲ ಕುಂಟೆ ತಾಲೂಕ ಉಪಾಧ್ಯಕ್ಷರು, ಹುಲುಗಪ್ಪ, ಚನ್ನಬಸವರಾಜ, ನಾಗರಾಜ ಹಿರೇ ಕಡಬೂರು ಸ್ಥಳೀಯರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*