ಚಾಲಕನ ನಿರ್ಲಕ್ಷದಿಂದ ರಾಸಾಯನಿಕ ಗೊಬ್ಬರ ತುಂಬಿದ ಟ್ಯಾಕ್ಟರ್ ಪಲ್ಟಿ 

ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,

ಜಿಲ್ಲಾ ಸುದ್ದಿಗಳು 

ಮಸ್ಕಿ

ಪಟ್ಟಣದ ಸಪ್ತಗಿರಿ ಬಾರ್ ಆಂಡ್ ರೆಸ್ಟೋರೆಂಟ್ ಮುಂದುಗಡೆಯ ರಾಷ್ಟ್ರೀಯ ಮುಖ್ಯ ಹೆದ್ದಾರಿಯಲ್ಲೇ, ಸಿಂಧನೂರಿ ನಿಂದ ಮಸ್ಕಿ ಮಾರ್ಗವಾಗಿ ಅಮರೇಶ್ವರ ಕ್ಯಾಂಪ್ ಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಾಲಕನು ಮದ್ಯಪಾನ ಮಾಡಿರುವುದರಿಂದ ಆತನು ಸಾರಿಗೆ ನಿಯಮ ಉಲ್ಲಂಘಿಸಿರುವುದರಿಂದಲೇ ಈ ದುರ್ಘಟನೆ ನಡೆದಿದೆ. ಟ್ರಾಕ್ಟರ್ ಪಲ್ಟಿಯಾದ ಸಮಯದಲ್ಲಿ ಯಾವುದೇ ವ್ಯಕ್ತಿ ಅಥವಾ ವಾಹನಗಳಿಲ್ಲದ ಕಾರಣ ಯಾರಿಗೂ ಹಾನಿಯುಂಟಾಗಿಲ್ಲ.

CHETAN KENDULI

 

ಟ್ರಾಕ್ಟರ್ ಚಾಲಕ ಸುರಕ್ಷವಾಗಿದ್ದು ಯಾವುದೇ ತೊಂದರೆ ಯಾಗಿಲ್ಲ ಎಂದು ಸ್ವತಃ ಚಾಲಕನೇ ಹೇಳಿಕೊಂಡಿದ್ದಾನೆ. ಪಲ್ಟಿಯಾಗಿ ಉರುಳಿಬಿದ್ದ ಟ್ರಾಕ್ಟರ್ ಅನ್ನು ಜೆಸಿಬಿ ಯಂತ್ರದ ಸಹಾಯದಿಂದ ಎತ್ತಲಾಯಿತು. ನಂತರ ಚೆಲ್ಲಾ ಪಿಲ್ಲಿಯಾಗಿ ರಸ್ತೆಯಲ್ಲೇ ಬಿದ್ದಿದ್ದಂತಹ ರಾಸಾಯನಿಕ ಗೊಬ್ಬರ ಚೀಲವನ್ನು ಮರಳಿ ಟ್ರಾಕ್ಟರ್ ಗೆ ಹೇರಿ ಸಾಗಿಸಲಾಯಿತು.

Be the first to comment

Leave a Reply

Your email address will not be published.


*