ಅಖಿಲ ಭಾರತ ಜರ್ನಲಿಸ್ಟ್ ಫೆಡರೇಷನ್ (ರಿ) , ದೆಹಲಿ, ಮುಂಡಗೋಡ್ ತಾಲೂಕ ಅಧ್ಯಕ್ಷರಾಗಿ ಶ್ರೀ ನಾಗರಾಜ್ ಅರ್ಜುನ್ ದೈವಜ್ಞ ಆಯ್ಕೆ

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ್

ಅಖಿಲ ಭಾರತ ಜರ್ನಲಿಸ್ಟ್ ಫೆಡರೇಷನ್ (ರಿ) ದೆಹಲಿ, ರಾಷ್ಟ್ರೀಯ ಜರ್ನಲಿಸ್ಟ್ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಮುಂಡಗೋ ತಾಲೂಕ ಅಧ್ಯಕ್ಷರಾಗಿ ಪ್ರಜಾ ವಾಹಿನಿ ದಿನಪತ್ರಿಕೆ ಮುಂಡಗೋಡ್ ತಾಲೂಕ ವರದಿಗಾರ ಶ್ರೀ ನಾಗರಾಜ್ ಅರ್ಜುನ್ ದೈವಜ್ಞ ನಾಯ್ಕ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ ಕುಮಾರ್ ನಾಯ್ಕಅವರ ಸೂಚನೆ ಮೇರೆಗೆ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಅವರು ನಾಗರಾಜ್ ದೈವಜ್ಞ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂಡಗೋಡ್ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಈ ಸಂಜೆ ಪತ್ರಿಕೆ ಮುಂಡಗೋಡ್ ತಾಲೂಕ ವರದಿಗಾರ ಶ್ರೀ ಶ್ರೀನಿವಾಸ ದೈವಜ್ಞ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂಡಗೋಡ್ ತಾಲೂಕ ಉಪಾಧ್ಯಕ್ಷರನ್ನಾಗಿ ಸಂಜೆವಾಣಿ ದಿನ ಪತ್ರಿಕೆ ಮುಂಡಗೋಡ್ ತಾಲೂಕ ವರದಿಗಾರ ಶ್ರೀ ಪರಶುರಾಮ ತಹಸೀಲ್ದಾರ ಅವರನ್ನು ಆಯ್ಕೆ ಮಾಡಿದ್ದಾರೆ ನೂತನ ಪದಾಧಿಕಾರಿಗಳಿಗೆ ಉತ್ತರ ಕನ್ನಡ ಜಿಲ್ಲಾ ಸಮಿತಿಯ ಎಲ್ಲ ಸದಸ್ಯರು ಮತ್ತು ಪದಾಧಿಕಾರಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.

CHETAN KENDULI

ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಿಗೆ ಯಾವುದೇ ಸಮಸ್ಯೆ ಆದಾಗ ಸಹಾಯ ಸಹಕಾರ ನೀಡುವುದರ ಜೊತೆಗೆ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧ್ಯಕ್ಶ ಕುಮಾರ್ ನಾಯ್ಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*