ತಾಲ್ಲೂಕು ಆಡಳಿತ ಹರಿಹರ ಇವರ ವತಿಯಿಂದ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಆಚರಿಸಲಾಯಿತು

ವರದಿ: ಆಕಾಶ್ ಚಲವಾದಿ

 

ಜಿಲ್ಲಾ ಸುದ್ದಿಗಳು

CHITAN KENDULI

ಹರಿಹರ:

ಕೋವಿಡ್ ೧೯ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ತಾಲ್ಲೂಕು ಆಡಳಿತದ ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿ ಮತ್ತು ಜೈನ್ ಸಮಾಜದ ಮುಖಂಡರು ಮಾತ್ರ ಭಾಗಿಯಾಗಿದ್ದರು.



ತಹಶಿಲ್ದಾರರಾದ ಕೆ.ಬಿ.ರಾಮಚಂದ್ರಪ್ಪ, ಸಿಪಿಐ ಸತೀಶಕುಮಾರ್,ಸಿಬ್ಬಂದಿ ವರ್ಗದವರು ಮತ್ತು ಸಮಾಜದವರು ಸೇರಿ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮಹಾವೀರರ ಜಯಂತಿಯನ್ನು ಆಚರಿಸಿದರು.

ತಹಶಿಲ್ದಾರರಾದ ರಾಮಚಂದ್ರಪ್ಪನವರು ಮತ್ತು ಸಿಪಿಐ ಸತೀಶಕುಮಾರರವರು, ಭಗವಾನ್ ಶ್ರೀ ಮಹಾವೀರರ ಜಯಂತಿಯ ಕುರಿತು ಮಾತನಾಡಿದರು.


 


ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಸಿಬ್ಬಂದಿಗಳಾದ ಹೇಮಂತಕುಮಾರ್,ಸಂತೋಷ್ ಹಾಗೂ ಮುಂತಾದವರು ಪಾಲ್ಗೊಂಡಿದ್ದರು



 

Be the first to comment

Leave a Reply

Your email address will not be published.


*