ಮುದ್ದೇಬಿಹಾಳ ಪಿ.ಎಲ್.ಡಿ. ಬ್ಯಾಂಕ್ ನೂತನ ನಮನಿರ್ದೇಶಕ ಸದಸ್ಯರಾಗಿ ಸಂಗನಬಸಪ್ಪ ನಿಂಗಪ್ಪ ಹುಂಡೆಕಾರ ಆಯ್ಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿರುದ್ದಿ ನಿಯಮಿತಕ್ಕೆ 16-06-2020 ರಂದು ಅಧಿಕಾರೆತರ ನಾಮನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಿದ್ದ ಮುದ್ದೇಬಿಹಾಳ ತಾಲೂಕಿನ ನವದಾಗಿ ಗ್ರಾಮದ ಬಸನಗೌಡ ಅಪ್ಪಾಸಾಹೇಬಗೌಡ ಇಬ್ರಾಹಿಂಪುರ ಅವರ ನಾಮನಿರ್ದೇಶಕ ಸದಸ್ಯತ್ವವನ್ನು ರಾಜ್ಯಪಾಲರ ಆದೇಶದ ಪ್ರಕಾರ ರದ್ದುಪಡಿಸಲಾಗಿದೆ ಎಂದು ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ಸಿ. ರಾಧಾ ಸೋಮವಾರ ಆದೇಶ ಹೊರಡಿಸಿದ್ದಾರೆ.



ನೇಮಕ:
ಮುದ್ದೇಬಿಹಾಳ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿರುದ್ದಿ ನಿಯಮಿತಕ್ಕೆ ನಾಮನಿರ್ದೇಶಕ ಸದಸ್ಯರನ್ನಾಗಿ ಮುದ್ದೇಬಿಹಾಳ ತಾಲೂಕಿನ ಅಡವಿಸೋಮನಾಳ ಗ್ರಾಮದ ಸಂಗನಬಸಪ್ಪ ನಿಂಗಪ್ಪ ಹುಂಡೆಕಾರ ಅವರನ್ನು ರಾಜ್ಯ ಸರಕಾರ ನೇಮಕ ಮಾಡಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಆಪ್ತ ಕಾರ್ಯದರ್ಶಿ ಬಾಬುರಾವ್ ಕುಲಕರ್ಣಿ ತಿಳಿಸಿದ್ದಾರೆ.

CHETAN KENDULI

Be the first to comment

Leave a Reply

Your email address will not be published.


*