ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮುದ್ದೇಬಿಹಾಳ ಪತ್ರಕರ್ತ ಡಿ.ಬಿ.ವಡವಡಗಿ ಆಯ್ಕೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.31:

ವಿಜಯಪುರ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮುದ್ದೇಬಿಹಾಳ ತಾಲೂಕಿನ ಹಿರಿಯ ಪತ್ರಕರ್ತ ಡಿ.ಬಿ.ವಡವಡಗಿ ಆಯ್ಕೆಯಾಗಿದ್ದು ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. 



ನ.1 ರಂದು ವಿಜಯಪುರದಲ್ಲಿ ನಡೆಯಲಿರು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನೆರೆವೇರಲಿದ್ದು ಮುದ್ದೇಬಿಹಾಳ ತಾಲೂಕಾ ಪತ್ರಕರ್ತರ ಸಂಘಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗಿದೆ. ಅದೇ ದಿನ ಮುದ್ದೇಬಿಹಾಳ ತಾಲೂಕಾ ಆಡಳಿತದಿಂದ ಕೊರೋನಾ ಸಂದರ್ಭದಲ್ಲಿ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದಕ್ಕಾಗಿ ಎಲ್ಲ ಪತ್ರಕರ್ಥರಿಗೂ ಸನ್ಮಾನ ಇಟ್ಟಿಕೊಂಡಿದ್ದು ಜಿಲ್ಲಾ ಹಾಗೂ ತಾಲೂಕಾ ಆಡಳಿತಕ್ಕೆ ಧನ್ಯವಾದಗಳನ್ನು ಮುದ್ದೇಬಿಹಾಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಮೀನ ಮುಲ್ಲಾ ಹೇಳಿದರು.  

ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಾ ಪತ್ರಕರ್ತ ಸಂಘದ ಉಪಾಧ್ಯಕ್ಷ ಗುರುನಾಥ ಕತ್ತಿ, ಪ್ರ.ಕಾರ್ಯದರ್ಶಿ ಸಿದ್ದು ಚಲವಾದಿ, ಪರಶುರಾಮ ಕೊಣ್ಣೂರ, ಮೆಹಬೂಬ್ ಹಳ್ಳೂರ, ಶಿವಕುಮಾರ ಶಾರದಾಳ್ಳಿ, ಮುತ್ತು ವಡವಡಗಿ, ಸಾಗರ ಉಕ್ಕಲಿ ಇದ್ದರು. 

 

Be the first to comment

Leave a Reply

Your email address will not be published.


*