ನಾಳೆ ಗಂಗಾಮತಸ್ಥ ಸಮಾಜದ ಪ್ರತಿಭಾನ್ವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ವರದಿ.. ಬಸವರಾಜ್ ಬಿರಾದರ್ ಅಂಬಿಗ ನ್ಯೂಸ್ ಟಿವಿ ಲಿಂಗಸಗೂರು

ಸಿಂಧನೂರು: ತಾಲೂಕಿನ ಗಂಗಾಮತಸ್ಥ ಸಂಘ, ಗಂಗಾಮತಸ್ಥ ನೌಕರರ ಸಂಘ ಹಾಗೂ ಅಂಬಿಗ ಯುವ ಸೇನೆ ಸಂಯುಕ್ತಾಶ್ರದಲ್ಲಿ ಅ.30 ಬೆಳಿಗ್ಗೆ ಗಂಗಾಮತಸ್ಥ ಸಮಾಜದ ಪ್ರತಿಭಾನ್ವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗಂಗಾಮತಸ್ಥ(ಅಂಬಿಗ) ಸಮಾಜದ ನೂತನ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಧಿಕಾರಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಹಾವೇರಿ ಜಿಲ್ಲೆಯ ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರ ಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಸೀಮಧನೂರು ಗಂಗಾಮತಸ್ಥ ಸಂಘದ ತಾಲೂಕಿನ ಗೌರವಾಧ್ಯಕ್ಷ ಬಿ.ಕೊಮಾರೆಪ್ಪ ವಹಿಸುವರು. ಕರ್ನಾಟಕ ರಾಜ್ಯ ಗಂಗಾಮತಸ್ಥ ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಂಗಾಪುತ್ರ ಅಂಬಿಗರ ಚೌಡಯ್ಯ ಸಂಶೋಧನಾ ಕೃತಿ ಮತ್ತು ಹರಿಗೋಲು ಅಂಬಿಗ ನಾಟಕದ ರಚನಕಾರರಾಗಿರುವ ಕನಕಗರಿಯ ಉಪನ್ಯಾಸಕ ಇಮಾಮ ಸಾಹೇಬ ಹಡಗಲಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.ಬುಡಕಟ್ಟು ಜನಾಂಗದ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ ಗಂಗಾಮತಸ್ಥ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಪಿಎಸ್ಐ ವಿಜಯ ಕೃಷ್ಣಗೌಡ, ಕ.ರ.ವೇ ರಾಜ್ಯ ಕಾರ್ಯದರ್ಶಿ ಶಿವಕುಮಾರ ನಾಟೀಕರ, ಡಿ.ಎಚ್.ಕಂಬಳಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*