ಮುದ್ದೇಬಿಹಾಳ ತಾಲೂಕಿನ ಯೋಧ ಹುತಾತ್ಮ: ನಾಳೆ ಪಾರ್ಥಿವ ಶರೀರ ಆಗಮನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ (ಆ. 31):

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಕರ್ತವ್ಯ ನಿರತ ಬಿಎಸ್ಎಫ್ ಯೋಧ ಶಿವಾನಂದ ಜಗನ್ನಾಥ ಬಡಿಗೇರ ವಿದ್ಯುತ್ ತಗುಲಿ ಹುತಾತ್ಮರಾಗಿದ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.



29 ವರ್ಷದ ಶಿವಾನಂದ ಜಗನ್ನಾಥ ಬಡಿಗೇರ 9 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಕಳೆದ ಒಂದು ವರ್ಷದ ಹಿಂದೆ ತಾಳಿಕೋಟೆ ತಾಲೂಕಿನ ಪುಷ್ಪಾ ಎಂಬುವವರ ಜೊತೆ ಮದುವೆಯಾಗಿದ್ದರು.
ಸೇನೆಯಲ್ಲಿ ಎಲೆಕ್ಟ್ರಿಕಲ್​​​ ವಿಭಾಗದಲ್ಲಿ ಎಲೆಕ್ಟ್ರಿಕ್ ಗಾರ್ಡ್ ಆಗಿ ಯೋಧ ಕೆಲಸ ಮಾಡುತ್ತಿದ್ದ. ರವಿವಾರ ಮಧ್ಯಾಹ್ನ ಕೆಲಸ ಮಾಡುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಸೇನೆಯ ಕಡೆಯಿಂದ ಯೋಧನ ಕುಟುಂಬಕ್ಕೆ ಮಾಹಿತಿ ಬಂದಿದೆ.

ಒಂಬತ್ತು ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಶಿವಾನಂದ ಜಗನ್ನಾಥ ಬಡಿಗೇರ, ಮೊದಲು ಬಾಂಗ್ಲಾದೇಶ ಮತ್ತು ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದರು. ರವಿವಾರ ಕರ್ತವ್ಯ ನಿರತರಾಗಿದ್ದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ.

 ನಾಳೆ ಪಾರ್ಥಿವ ಶರೀರ ಆಗಮನ:

ಯೋಧನ ಪಾರ್ಥಿವ ಶರೀರ ಬಸರಕೋಡ ಗ್ರಾಮಕ್ಕೆ ಮಂಗಳವಾರ ಆಗಮಿಸಲಿದೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.

ಬಡಿಗೇರ ಕುಟುಂಬವೇ ಸೇನೆಯಲ್ಲಿ:

ಯೋಧನ ಮತ್ತೋಬ್ಬ ಸಹೋದರ ಕೂಡ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಸರಕೋಡ ಗ್ರಾಮದ ಮೂಲಗಳು ತಿಳಿಸಿವೆ. ಬೇಗನೇ ತಮ್ಮ ಸಹೋದರನ ಪಾರ್ಥೀವ ಶರೀರ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಯೋಧನ ಸಹೋದರ ಕಾಳಪ್ಪ ಬಡಿಗೇರ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*