ಜಮೀನು ವಿಚಾರಕ್ಕಾಗಿ ಒಂದು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಅಂಬಿಗ ನ್ಯೂಸ್ ಯಾದಗಿರಿ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ಜಮೀನು ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ಗಲಾಟೆ ನಡೆದಿದ್ದು ನಾಲ್ಕು ಜನರಿಗೆ ಗಂಭೀರ ಗಾಯ ಕಲ್ಬುರ್ಗಿ ಆಸ್ಪತ್ರೆಗೆ ರವಾನೆ

ತಿಮ್ಮಣ್ಣ ಮತ್ತು ಆತನ ಮಕ್ಕಳಿಗೆ ಸೇರಿದ ಸರ್ವೆ ನಂಬರ್ 130ರ ಜಮೀನಿನಲ್ಲಿ ಇನ್ನೂಂದು ಕುಟುಂಬ ಬಲವಂತವಾಗಿ ಸಾಗುವಳಿ ಮಾಡಲು ಮುಂದಾಗಿದೆ ಇದನ್ನು ಪ್ರಶ್ನಿಸಿದ ತಿಮ್ಮಣ್ಣನ ಕುಟುಂಬದವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬಹಳ ದಿನಗಳಿಂದ ಕುಟುಂಬಗಳ ಮಧ್ಯ ಜಮೀನು ವಿವಾದವಿದ್ದು ಸಂಬಂಧ ಪಟ್ಟ ಜಮೀನಿನ ದಾವೆ ನ್ಯಾಯಲಯದಲ್ಲಿದೆ ಇನ್ನೂ ಯಾವುದೇ ತೀರ್ಪು ಬಂದಿರುವುದಿಲ್ಲ ಆದ್ದರಿಂದ ಜಮೀನಿನಲ್ಲಿ ಯಾರು ಕೂಡಾ ಸಾಗುವಳಿ ಮಾಡುತ್ತಿರಲಿಲ್ಲವೆಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

ಟ್ರ್ಯಾಕ್ಟರನಲ್ಲಿ ತಂದಿದ್ದ ಕಲ್ಲು, ಕೊಡಲಿ,ಬೇಡಗ,ದೊಣ್ಣೆಗಳಿಂದ ಹಲ್ಲೆ ಮಾಡಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಸುರಪುರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿಗೆ ಜಿಲ್ಲಾ ಆಸ್ಪತ್ರೆ ರವಾನಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಸುರಪುರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಘವೇಂದ್ರ ಮಾಸ್ತರ ಯಾದಗಿರಿ

Be the first to comment

Leave a Reply

Your email address will not be published.


*