ಬಡ ಕ್ರೀಡಾಪಟುಗಳಿಗೆ ಫುಡ್ ಕಿಟ್ ವಿತರಣೆ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಬಾಗಲಕೋಟೆ:ಕೋವಿಡ್-19 ಭೀತಿಯಿಂದಾಗಿ ತೊಂದರೆಗೆ ಒಳಗಾದ ಜಿಲ್ಲೆಯ ಬಡ ಕುಟುಂಬದ ಕ್ರೀಡಾಪಟುಗಳಿಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಜಿ.ಪಂ ಸಮುದಾಯ ಕೇಂದ್ರದಲ್ಲಿಂದು ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸೈಕ್ಲಿಂಗ್, ಕುಸ್ತಿ, ಮಲ್ಲಕಂಬ ಹಾಗೂ ಅಥ್ಲೇಟಿಕ್ಸ್ ಕ್ರೀಡಾಪಟುಗಳಿಗೆ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಎನ್.ವಾಯ್.ಕುಂದರಗಿ, ತರಬೇತುದಾರರಾದ ಅನಿತಾ ನಿಂಬರಗಿ ಸೇರಿದಂತೆ ಇತರರು ಇದ್ದರು.

Be the first to comment

Leave a Reply

Your email address will not be published.


*