ವಿದ್ಯುತ್ ತಂತಿ ತುಳಿದು ರೈತ ಸಾವು

ವರದಿ:- ವಿ.ಜಿ.ಋಷಿಬೇಂದ್ರ ಕೂಡ್ಲಿಗಿ

 ರೈತ ಧ್ವನಿ

ವಿದ್ಯುತ್ ತಂತಿ ತುಳಿದು ರೈತನೋವ೯ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ,ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.ಮೃತ ರೈತ ಕುರುಬರ ರೇವಣ್ಣ(25)ತಂದೆ ಭರಮಣ್ಣ,ತನ್ನ ಹೊಲದಲ್ಲಿದ್ದ ಟಮೋಟಾ ಗಿಡಗಳಿಂದ ಟಮೋಟಾ ಬಿಡಿಸುವಾಗ,ರಾತ್ರಿಯೇ ಗಾಳಿಯ ರಬಸಕ್ಕೆ ಗಿಡಗಳ ಮರೆಯಲ್ಲಿ ಬಿದ್ದಿದ್ದ ಪ್ರಮುಖ ವಿದ್ಯುತ್ ಸರಬರಾಜಿದ್ದ ತಂತಿಯನ್ನು ತುಳಿದಿದ್ದಾನೆ. 

         ಆ ಕ್ಷಣಾಧ೯ದಲ್ಲಿಯೇ ರೇವಣ್ಣನ ದೇಹದಲ್ಲಿ ವಿದ್ಯುತ್ ಪ್ರವಹಿಸಿದೆ,ಪರಿಣಾಮ ಸ್ಥಳದಲ್ಲಿಯೇ ರೈತ ಮೃತಪಟ್ಟಿದ್ದಾನೆ.ರೇವಣ್ಣನೊಂದಿಗೆ ಹೊಲದಲ್ಲಿ ಹತ್ತಾರು ರೈತ ಕೂಲಿಕಾ‍ಮಿ೯ಕರು ಟಮೋಟ ಬಿಡಿಸುವುದರಲ್ಲಿ ನಿರತರಾಗಿದ್ದರು,ಅವರು ರೇವಣ್ಣನಿಂದ ಅನತಿ ದೂರದಲ್ಲಿದ್ದರಿಂದಾಗಿ ಹೆಚ್ಚಿನ ಪ್ರಾಣ ಹಾನಿ ತಪ್ಪಿದೆ ಎಂದು ತಿಳಿದುಬಂದಿದೆ.

Be the first to comment

Leave a Reply

Your email address will not be published.


*