ಶಹಾಪೂರ ತಾಲೂಕಿನ ಕನ್ಯಾಕೋಳೂರು ಜಾಪ್ನಾ ನಾಯಕ ತಾಂಡಾದ ಮೇಲೆ ಪೋಲಿಸರ ದಾಳಿ ಕಳ್ಳಭಟ್ಟಿ ಸಾರಾಯಿ ವಶ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಶಹಾಪೂರ

ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ ಜಾಪ್ನಾ ನಾಯಕ್ ತಾಂಡಾದಲ್ಲಿ ಕಳ್ಳಭಟ್ಟಿ ಸಾರಾಯಿ ಮಾಡುತ್ತಿದ್ದವರ ಮೇಲೆ ಇಂದು ಮುಂಜಾನೆ ಪೊಲೀಸರು ಮತ್ತು ಅಬಕಾರಿ ತಂಡದವರು ಜಂಟಿಯಾಗಿ ದಾಳಿ ಮಾಡಿ 31 ಬಿಂದಿಗೆ ಮೂರು ಡ್ರಮ್ 8 ಬಕೆಟ್ ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸಾವಿರಾರು ಲೀಟರ್ ಕಳ್ಳಬಟ್ಟಿ ಸಾರಾಯಿ ಯನ್ನು ಪೊಲೀಸರು ವಶಪಡಿಸಿಕೊಂಡು ನಾಶಪಡಿಸಿದ್ದಾರೆ.

ಯಾದಗಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೊನಾವಣೆ ಡಿವೈಎಸ್ಪಿ ವೆಂಕಟೇಶ್ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ಶಹಾಪುರ ನಗರದ ಪಿಎಸ್ಐ ಚಂದ್ರಕಾಂತ್ ಮಕಾಲೆ ಮತ್ತು ಎಎಸ್ಐ ಸೋಮಲಿಂಗಪ್ಪ ರವರ ತಂಡ ಖಚಿತ ಮಾಹಿತಿ ದೊರೆತ ನಂತರ ದಾಳಿ ನಡೆಸಿದರು ಇದೇ ರೀತಿಯ ಕಳ್ಳಭಟ್ಟಿ ಸಾರಾಯಿ ಗಳು ತಾಲೂಕಿನ ಹಲವಾರು ಭತ್ತದ ಬಣವೆಗಳನ್ನು ಅಡಗಿಸಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Be the first to comment

Leave a Reply

Your email address will not be published.


*