ಸುರಪುರ ನಗರದ  ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಸನ್ಮಾನ

ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಸುರಪುರ ತಾಲೂಕು ಅಧ್ಯಕ್ಷರಾದ ವೆಂಕಟೇಶ ನಾಯಕ್ ಬೈರಿಮಡ್ಡಿ ಯವರ ನೇತೃತ್ವದಲ್ಲಿ ಇಂದು ತಾಲೂಕಿನ ಪತ್ರಿಕಾ ಭವನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಪರಿಶ್ರಮ, ಸರ್ಕಾರದ ವಿವಿಧ ಇಲಾಖೆಗಳ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು,ಪತ್ರಕರ್ತರ ಕರ್ತವ್ಯವನ್ನು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಕರವೇ ವತಿಯಿಂದ 19 ನೇ ವರ್ಷದ ರಾಜ್ಯೋತ್ಸವ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಸಂ.ಕಾರ್ಯದರ್ಶಿ ಭೀಮು ಮಲ್ಲಭಾವಿ, ತಾಲೂಕ ಅಧ್ಯಕ್ಷ ಶ್ರೀ ವೆಂಕಟೇಶ ನಾಯಕ ಭೈರಿಮಡ್ಡಿ, ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ಶ್ರೀ ನಿವಾಸ ಲಕ್ಷ್ಮೀ ಪೂರ, ಹಣಮಂತ ಹಾಲಗೇರಿ, ರಂಗನಾಥ ಬಿರಾದಾರ, ಸೋಮಯ್ಯ ಹಾಲಗೇರಿ, ಯುವ ಘಟಕದ ನಾಗರಾಜ ಡೊಣ್ಣಿಗೇರಿ, ಸಾಯಬಣ್ಣ ಬೆಂಕಿ ದೊರಿ, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ, ಅರ್ಜುನ ಯಕ್ಷಿಂತಿ, ನಗರಘಟಕದ ಮಲ್ಲು ವಿಷ್ಣು ಸೇನೆ, ಬಲಭೀಮ ಬೊಮ್ಮನಹಳ್ಳಿ, ಮಹಾರಾಜ ಹೆಮ್ಮಡಿಗಿ ರಾಜು ಶಹಾಪುರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*