ಬಲಕುಂದಿ ತಾಂಡಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ-ವಿವಿಧ ಮಹನೀಯರ ವೇಷಭೂಷಣದಲ್ಲಿ ಮಿಂಚಿದ ಮಕ್ಕಳು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದಲ್ಲಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

CHETAN KENDULI

ಕಾರ್ಯಕ್ರಮದ ವೇದಿಕೆಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಾದ ಗಾಂಧೀಜಿ,ನೆಹರುಜೀ,ಶಾಸ್ತ್ರಿಜೀ, ಸಾವಿತ್ರಿಬಾಯಿ ಫುಲೆ,ಕಲ್ಪನಾ ಚಾವ್ಲಾ,ಭಗವಾನ್ ಗಣೇಶ, ಅನ್ನದಾತ ರೈತ,ಭಗವಾನ್ ಬುಧ್ದ, ಸೀತಾಮಾತೆ,ರಾಣಿ ಚನ್ನಮ್ಮ,ಸಂಗೊಳ್ಳಿ ರಾಯಣ್ಣ, ವಾರ್ತಾ ವಾಚಕಿ,ಕೊರವಂಜಿ, ಮದರ್ ತೆರೇಸಾ,ಇಂದಿರಾ ಗಾಂಧಿ,ಒನಕೆ ಒಬವ್ವ,ಸಾಲುಮರದ ತಿಮ್ಮಕ್ಕ,ವೈಧ್ಯ,ಶಿಕ್ಷಕರು ಹಾಗೂ ವಿವಿಧ ಮಹನೀಯರ ವೇಷಭೂಷಣದಲ್ಲಿ ಮಕ್ಕಳು ವೇದಿಕೆಯನ್ನು ಅಲಂಕರಿಸಿದ್ದರು ಹಾಗೂ ಒಬ್ಬೊಬ್ಬರಾಗಿ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ತದನಂತರ ಮಕ್ಕಳಿಗೆ ಕಪ್ಪೆಓಟ,ಮ್ಯುಜಿಕಲ್ ಚೇರ್ ಹಾಗೂ ಇನ್ನೀತರ ಆಟಗಳನ್ನು ಶಿಕ್ಷಕರು ಆಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಪರಶುರಾಮ ಪಮ್ಮಾರ,ಶಿಕ್ಷಕರಾದ ಮುತ್ತಣ್ಣ ಬೀಳಗಿ,ಎ.ಡಿ ಬಾಗವಾನ, ಗುರುದೇವಿ ಮಠ,ರೇಣುಕಾ ಕೊಡಗಲಿ,ಪ್ರಭಾವತಿ ಹೊಸೂರು,ಶಶಿಕಲಾ ಜೋಗಿನ,ಮಂಜುಳಾ ಅರಳಿಕಟ್ಟಿ, ಮಂಜುಳಾ ಚೇಗೂರ,ಸುವರ್ಣ ಮಲಗಿಹಾಳ,ಸಾಯಿರಾ ಹೆರಕಲ್,ನಿರ್ಮಲಾ ಜಾಧವ,ಪ್ರಸನ್ನ ಮೇಗಾಡಿ ಉಪಸ್ಥಿರಿದ್ದರು.

Be the first to comment

Leave a Reply

Your email address will not be published.


*