ಉಮೇಶ ಮುದ್ನಾಳ 51ನೇ ಹುಟ್ಟುಹಬ್ಬದಂದು ಬೃಹತ್ ಬೈಕ್ ರ‍್ಯಾಲಿ ಮೂಲಕ ವಿನೂತನ ಪ್ರತಿಭಟನೆ, ಜಾದು ಪ್ರದರ್ಶನ ;ನಿರ್ಧಾರ

ಯಾದಗಿರಿ: ಯಾದಗಿರಿ ಜಿಲ್ಲೆಯ ವಿವಿಧ ಸಮಸ್ಯೆಗಳು ಕುರಿತು ಸಾಕಷ್ಟು ಬಾರಿ ಸಂಬoಧಪಟ್ಟವರ ಗಮನಕ್ಕೆ ತಂದರೂ ಮತ್ತು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ

 

 

ನಾಮಕಾವಾಸ್ತೆ ಭೆಟಿ ನೀಡಿ ನಿರ್ಲಕ್ಷö್ಯ ತೋರುತ್ತಿರುವುದನ್ನು ವಿರೋಧಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಕ್ ಕತ್ತರಿಸದೇ ಹಾರ ತುರಾಯಿ ಹಾಕಿಕೊಳ್ಳದೇ ಸಾರ್ವಜನಿಕರ ಹಿತಕ್ಕಾಗಿ ನನ್ನ 51ನೇ ಹುಟ್ಟು ಹಬ್ಬಕ್ಕೆ ಪ್ರತಿಭಟನೆ ಮೂಲಕ ರೈಲು ನಿಲ್ದಾಣಕ್ಕೆ ತೆರಳಿ ಎಲ್ಲ ರೈಲುಗಳು ಯಾದಗಿರಿಯಲ್ಲಿ ನಿಲುಗಡೆಗೆ ಆಗ್ರಹಿಸಿ ಬೃಹತ್ ಬೈಕ್ ರ‍್ಯಾಲಿ ಮೂಲಕ ತೆರಳಿ ಮನವಿ ಸಲ್ಲಿಸಿ ಅಲ್ಲಿಂದ ಡಿಸಿ ಕಚೇರಿಗೆ ಆಗಮಿಸಿ 9 ಬೇಡಿಕೆಗಳುಳ್ಳ ಮನವಿಯನ್ನು ನಾಳೆ ಬೆಳಗ್ಗೆ 10.30 ರಿಂದ ರ‍್ಯಾಲಿಯಲ್ಲಿ ಆಗಮಿಸಿ ಸಲ್ಲಿಸಲಾಗುತ್ತಿದೆ ಎಂದು ಕೋಲಿ ಸಮಾಜದ ರಾಜ್ಯ ಸಂ. ಕಾರ್ಯದರ್ಶಿ ಹಾಗೂ ಗಿರಿನಾಡು ಲಘು ವಾಹನ ಚಾಲಕರ ಸಂಘದ ಗೌರವಾಧ್ಯಕ್ಷ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ..

Be the first to comment

Leave a Reply

Your email address will not be published.


*