ಗೃಹಜ್ಯೋತಿ ಯೋಜನೆ: ಉಚಿತ ವಿದ್ಯುತ್ ಪಡೆಯಲು ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ವರದಿ: ಅಂಬಿಗ ನ್ಯೂಸ್ ತಂಡ

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.

CHETAN KENDULI

ವಾಣಿಜ್ಯ ಬಳಕೆ ಹೊರತುಪಡಿಸಿ ಪ್ರತಿ ಮನೆಗೆ 200 ಯೂನಿಟ್​ಗಳವರೆಗೆ ಉಚಿತ ವಿದ್ಯುತ್​ ನೀಡುವುದು ಗೃಹಜ್ಯೋತಿ ಯೋಜನೆಯ ಉದ್ದೇಶವಾಗಿದೆ. ಆದರೆ, ರಾಜ್ಯದ ಬಹುತೇಕ ಮನೆಗಳಲ್ಲಿ 200 ಯೂನಿಟ್​ ವಿದ್ಯುತ್​ ಬಳಸುವುದೇ ಇಲ್ಲ. ಹಾಗಾಂತ ಯದ್ವಾತದ್ವಾ ವಿದ್ಯುತ್​ ಬಳಸುವ ಆಗಿಲ್ಲ. ಏಕೆಂದರೆ, ಪ್ರತಿ ತಿಂಗಳು ಪ್ರತಿ ಕುಟುಂಬಗಳು ಬಳಸುವ ವಿದ್ಯುತ್​ ಯೂನಿಟ್​ ಮೇಲೆ ಹೆಚ್ಚುವರಿಯಾಗಿ ಶೇ. 10 ರಷ್ಟು ವಿದ್ಯುತ್ ಬಳಕೆ ಮಾತ್ರ ಅವಕಾಶ​ ನೀಡಲಾಗುತ್ತದೆ. ಅದಕ್ಕಿಂತ ಮಿತಿ ಮೀರಿದರೆ ಹೆಚ್ಚುವರಿ ವಿದ್ಯುತ್​ ಬಳಕೆಯ ಬಿಲ್​ ಕಟ್ಟಬೇಕು. ಅಲ್ಲದೆ, 200 ಯೂನಿಟ್​ಗಿಂತ ಹೆಚ್ಚು ಬಳಸಿದರೆ ಪೂರ್ತಿ ಬಿಲ್​ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಇಂಧನ ಇಲಾಖೆ ಹೇಳಿದೆ.

ಅಂದಹಾಗೆ ಅರ್ಜಿ ಪ್ರಕ್ರಿಯೆ ತುಂಬಾ ಸರಳವಾಗಿದೆ. ಜನರು ಇಂಟರ್ನೆಟ್​ ಕೇಂದ್ರಗಳಲ್ಲಿ ಕ್ಯೂನಲ್ಲಿ ನಿಂತು ಪರದಾಡುವುದನ್ನು ತಪ್ಪಿಸುವಎಲ್ಲಾ ಉದ್ದೇಶದಿಂದ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಜತೆಗೆ ಬೆಂಗಳೂರು ಒನ್‌, ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರ, ನಾಡಕಚೇರಿ ಸೇರಿದಂತೆ ಎಲ್ಲ ವಿದ್ಯುತ್‌ ಕಚೇರಿಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ಗ್ರಾಹಕರು ಸರ್ಕಾರದ ಸೇವಾಸಿಂಧು (https://sevasindhugs.karnataka.gov.in/gruhajyothi) ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

Be the first to comment

Leave a Reply

Your email address will not be published.


*