ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್: ಸರ್ಕಾರಿ ಬಸ್’ಗಳು ಫುಲ್ ರಶ್

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಜಿಲ್ಲೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿರುವ ಮಹಿಳೆಯರು.ಕರ್ನಾಟಕ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿದೆ ಅದರಲ್ಲಿ ಇಂದು ಮೊದಲ ವೀಕೆಂಡ್ ದೇವರ ದರ್ಶನಕ್ಕೆಂದು ಸಾವಿರಾರು ಮಹಿಳೆಯರು ಹೊರಟಿದ್ದಾರೆ.

CHETAN KENDULI

ಪ್ರಯಾಣಿಕರ ಮಾತು ಸರ್ಕಾರ ಮಹಿಳೆಯರಿಗೆ ಬಸ್ ಉಚಿತ ಮಾಡಿದೆ ಆದರೆ ಅಷ್ಟೊಂದು ಪ್ರಮಾಣದಲ್ಲಿ ಬಸ್ ನಿಲ್ದಾಣಕ್ಕೆ ಬಸ್ ಬರ್ತಾ ಇಲ್ಲ.ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬಸ್ಸುಗಳನ್ನು ಒದಗಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡರು.

ತುಂಬಿ ತುಳುಕುತ್ತಿರುವ ಬಸ್ ಸ್ವಲ್ಪ ಯಾಮಾರಿದರು ಪ್ರಾಣಕ್ಕೆ ಕುತ್ತು ಬರುವುದು ಶತಸಿದ್ಧ. ಯಾಕೆಂದರೆ ಅಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಬಸ್ಸಿನಲ್ಲಿ ಹತ್ತುತ್ತಿದ್ದಾರೆ. ಬಸ್ ಹತ್ತುವ ರಬಸದಲ್ಲಿ ಸ್ವಲ್ಪ ಯಾಮಾರಿದರೆ ದೇವರೇ ಗತಿ. ಕೂಡಲೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಬಸ್ಸುಗಳನ್ನು ಒದಗಿಸಿ ನಮಗೆ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿನಂತಿ ಮಾಡಿಕೊಂಡರು.

Be the first to comment

Leave a Reply

Your email address will not be published.


*