ಶರಣಬಸಪ್ಪ ಗೌಡ ದರ್ಶನಾಪುರ ಗೆಲುವಿಗಾಗಿ ಹರಕೆ ಹೊತ್ತು ನಡೆದ ಅಯ್ಯಣ್ಣ ಮಡಿವಾಳರ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಹಾಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶರಣಬಸಪ್ಪಗೌಡ ದರ್ಶನಾಪುರ ಬಹುಮತದಿಂದ ಗೆದ್ದು ಬರಲೆಂದು ಹರಕೆ ಹೊತ್ತು ಹೊರಟಿರುವ ಅಯ್ಯಣ್ಣ ಮಡಿವಾಳರ ಹೆಗ್ಗನದೊಡ್ಡಿ ಹಾಗೂ ಗೋಡ್ರಿಹಾಳ ಅವಳಿ ಗ್ರಾಮದ ಆರಾಧ್ಯ ದೈವ ಶ್ರೀ ಮರುಳಸಿದ್ದೇಶ್ವರ ಧರ್ಮರ ಮಠದಿಂದ ಇಬ್ರಾಹಿಂಪುರ ಅಬ್ದುಲ್ ಭಾಷಾ ಕೆರೆಯವರೆಗೆ ದೀರ್ಘದಂಡ ನಮಸ್ಕಾರ ಮೂಲಕ ಹರಕೆ ತೀರಿಸುತ್ತಿದ್ದಾರೆ.

ದರ್ಶನಾಪುರವರ ಅಪ್ಪಟ ಅಭಿಮಾನಿ ಆಗಿರುವ ಅಯ್ಯಣ್ಣ ಮಡಿವಾಳರ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ, ಬಿಜೆಪಿ ಸರ್ಕಾರವು ಬಡವರ ವಿರೋಧಿ ಸರ್ಕಾರವಾಗಿದ್ದು ರಸ ಗೊಬ್ಬರಗಳ ದುಪ್ಪಟ್ಟಿನಿಂದ ರೈತರು ಕಂಗಲಾಗಿದ್ದು, ತಿನ್ನುವ ಅನ್ನದ ಮೇಲೆ ಜಿಎಸ್​ಟಿ, ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೇ, ಜನರು ಕಷ್ಟಗಳಿಗೆ ಸ್ಪಂದಿಸದ ಸರ್ಕಾರವನ್ನು 2023ರ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನರು ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ತಮ್ಮ ಮನದಾಳದ ಮಾತಿನ ಮೂಲಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಮಾಜಿ ಸಿ.ಎಂ ಸಿದ್ದರಾಮಯ್ಯರವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಬೇಕು ಹಾಗೂ ಶಹಪುರದಲ್ಲಿ ಶರಣ ಬಸಪ್ಪಗೌಡ ದರ್ಶನಾಪುರವರು ಬಹುಮತದಿಂದ ಗೆದ್ದು ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ದೀರ್ಘ ದಂಡ ನಮಸ್ಕಾರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ಅವಳಿ ಗ್ರಾಮಗಳಾದ ಹೆಗ್ಗಣದೊಡ್ಡಿ ಹಾಗೂ ಗೋಡ್ರಿಹಾಳ ಗ್ರಾಮದ ಕಾಂಗ್ರೆಸ್ ಮುಖಂಡರಾದ ಮಾನಪ್ಪ ಸೂಗೂರು, ದೇವಣ್ಣ ದೊರಿ, ಮಕ್ಬುಲ್ ಪಟೇಲ್, ಗೋವಿಂದಪ್ಪ ದೊರೆ, ಲಾಳೆ ಪಟೇಲ್, ಶಿವಪುತ್ರ ಸಾಹುಕಾರ್,ದೇವೇಂದ್ರಪ್ಪ ಮಡಿವಾಳರ, ಮಾಳಪ್ಪ ಪೂಜಾರಿ, ಸಿದ್ದಯ್ಯ ಗುತ್ತೇದಾರ, ರಮೇಶ್ ಗರಡಿಮನಿ, ಮಡಿವಾಳಪ್ಪ ಪಾಟೀಲ, ರಾಮಣ್ಣ ಅಡೆಮನಿ, ಶರಣಪ್ಪ ವಡಿಗೇರಿ, ಪ್ರಧಾನಪ್ಪ ಮಳ್ಳಿ,ಪಂಚಾಕ್ಷರಿ, ಚಂದ್ರಕಾಂತ ನಾಗೂರು,ಪಿಡಪ್ಪ ದೊರೆ, ಅವಳಿ ಗ್ರಾಮದ ಯುವಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

 

 

Be the first to comment

Leave a Reply

Your email address will not be published.


*