” ಹುನಗುಂದ ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಸಿ ಇ ಟಿ ಮಾದರಿ ಕೌನ್ಸಲಿಂಗ್ ಮೂಲಕ ಹೊಸ ವಿದ್ಯಾರ್ಥಿಗಳ ಆಯ್ಕೆ”

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಹುನಗುಂದ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶಕೋರಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಪಿ ಯು ಸಿ /ಪಿ ಯು ಸಿ ಸಮಾನಾಂತರ ಕೊರ್ಸುಗಳ ವಿದ್ಯಾರ್ಥಿಗಳಿಗೆ ಸಿ ಇ ಟಿ ಮಾದರಿ ಕೌನ್ಸಲಿಂಗ್ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಡಿ ದೇವರಾಜ ಅರಸು ಭವನ ಹುನಗುಂದದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮೆರಿಟ್ ಆಧಾರದ ಮೇಲೆ ಕೌನ್ಸಲಿಂಗ್ ಮೂಲಕ ಪ್ರಸಕ್ತ ಸಾಲಿಗೆ ಖಾಲಿ ಇರುವ ಪಿ ಯು ಸಿ/ಪಿ ಯು ಸಿ ಸಮಾನಾಂತರ ಕೋರ್ಸುಗಳ ವಿದ್ಯಾರ್ಥಿಗಳ ಸ್ಥಾನಗಳಿಗೆ ಅಯಾ ವಿದ್ಯಾರ್ಥಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಹಿಂದಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ ಎನ್ ಖ್ಯಾಡಿ, ಸಮಾಜ ಕಲ್ಯಾಣಾಧಿಕಾರಿ ಎಂ ಬಿ ಕಟ್ಟಿಮನಿ , ವಿಸ್ತರಣಾಧಿಕಾರಿ ಎಸ್ ಎಸ್ ಗಡೇದ, ನಿಲಯ ಮೇಲ್ವಿಚಾರಕರಾದ ವಿದ್ಯಾಧರ ,ನಾಡಗೌಡ,ಮಕಾನಾದಾರ, ರಾಠೋಡ ಹಾಗೂ ಶ್ರೀಮತಿ ಗಡ್ಡಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಕೌನ್ಸಲಿಂಗ್ ಪ್ರಕ್ರಿಯೆ ಯಲ್ಲಿ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*