ಮೊಗವೀರ ಸಮುದಾಯದ ಮುಖಂಡರಿಂದ ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ

ಮಂಗಳೂರು: ಮೊಗವೀರ ಸಮುದಾಯದವರಿಗೆ ನಾಲ್ಕು ದಶಕಗಳಿಂದ ಯಾವ ಸ್ಥಾನವನ್ನೂ ನೀಡಲಿಲ್ಲವೆಂದು ಆರೋಪಿಸಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ರಾಮಚಂದರ್ ಬೈಕಂಪಾಡಿ ಸೇರಿದಂತೆ ಪ್ರಮುಖರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮಚಂದರ್‌ ಅವರು ‘ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ ತಣ್ಣೀರುಬಾವಿ ಮತ್ತು 9 ಮಂದಿ ಸದಸ್ಯರು, ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೇಮನಾಥ ಉಳ್ಳಾಲ, ಪ್ರಕೋಷ್ಠದಲ್ಲಿ ಅಧ್ಯಕ್ಷರಾಗಿದ್ದ ನವೀನ್ ತಣ್ಣೀರುಬಾವಿ, ಶೋಭೇಂದ್ರ ಸಸಿಹಿತ್ಲು, ಯಶವಂತ ಉಳ್ಳಾಲ, ನಗರಸಭಾ ಸದಸ್ಯ ಬಾಬು ಬಂಗೇರ ಉಳ್ಳಾಲ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಯಲ್ಲಿರುವವರು ರಾಜೀನಾಮೆ ಸಲ್ಲಿಸಿದ್ದಾರೆ. ನಾನು ರಾಜ್ಯೋತ್ಸವ ಪ್ರಶಸ್ತಿ ಹಿಂದಿರುಗಿಸಿದ್ದೇನೆ’ ಎಂದು ತಿಳಿಸಿದರು.


ಕರಾವಳಿ ಭಾಗದ ಮೋಗವೀರ ಸಮುದಾಯದ ನಿರ್ಣಯಕ್ಕೆ ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟ ಜಿಲ್ಲೆಯ ಕೋಲಿ ಸಮಾಜ ಸಂಪೂರ್ಣ ಬೆಂಬಲವಿದೆ.ಕರಾವಳಿ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿರಿವುದೆ ನಮ್ಮ ಸಮುದಾಯದ ಬೆಂಬಲದಿಂದ ಆದರೆ ಸಮುದಾಯಕ್ಕೆ ಸಿಗಬೇಕಾದ ರಾಜಕೀಯ ಸೌಲಭ್ಯಗಳು ಮಾತ್ರ ಅನ್ಯರ ಪಾಲು ಮೂಲ ಮೀನುಗಾರರಾದ ನಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಇಲ್ಲ ,ಮೀನುಗಾರ ನಿಗಮ ಇಲ್ಲ, ಇಂತ ಅನ್ಯಾಯ  ಬಿಜೆಪಿ ಪಕ್ಷ ಮುಂದುವರಿಸಿ ಸಮುದಾಯವನ್ನು ಕಡೆಗಣಿಸಿದರೆ ತಕ್ಕ ಪಾಠವನ್ನು  ಕಲಿಸುತ್ತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಅಮರೇಶ ಕಾಮನಕೇರಿ                                     ರಾಜ್ಯಾಧ್ಯಕ್ಷರು                                                  ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ (ರಿ)


ಮೊಗವೀರ ಸಮುದಾಯಕ್ಕೆ ಬಿಜೆಪಿ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ. ರಾಜ್ಯ ಮೀನುಗಾರರ ನಿಗಮಕ್ಕೆ ಬೇರೆ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲಾಗುವುದು. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿ ಸಮುದಾಯದ ಶಕ್ತಿಯನ್ನು ಸಾಬೀತು ಮಾಡಲಾಗುವುದು. ಗಂಗಾಮತಸ್ಥ ಸಮುದಾಯದ ರಾಜ್ಯ ಘಟಕ, ರಾಜ್ಯ ಬೆಸ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘು, ಉತ್ತರ ಕನ್ನಡದ ಖಾರ್ವಿ ಮತ್ತು ಹರಿಕಾಂತ ಸಮುದಾಯದ ಮುಖಂಡರು ಇದಕ್ಕೆ ಬೆಂಬಲ ಘೋಷಿಸಿದ್ದಾರೆ’ ಎಂದು ಅವರು ವಿವರಿಸಿದರು.

‘2005ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಿ ಕೊನೆಯ ಕ್ಷಣದಲ್ಲಿ ಮನೋರಮಾ ಮಧ್ವರಾಜ್‌ ಅವರನ್ನು ಕರೆತಂದರು. ಅಣು ಒಪ್ಪಂದದಲ್ಲಿ ₹73 ಕೋಟಿ ಲಂಚ ಪಡೆದು ಮನೋರಮಾ ಮತ್ತು ಪ್ರಮೋದ್ ಮಧ್ವರಾಜ್ ದ್ರೋಹ ಬಗೆದರು. ಪಕ್ಷಕ್ಕಾಗಿ 30 ವರ್ಷಗಳಿಂದ ದುಡಿಯುತ್ತಿರುವ ಯಶ್‌ಪಾಲ್ ಸುವರ್ಣ, ಲಾಲಜಿ ಮೆಂಡನ್ ಮತ್ತು ನಯನಾ ಗಣೇಶ್ ಅವರಿಗೆ ಬಿಜೆಪಿ ದ್ರೋಹ ಬಗೆಯುತ್ತಿದೆ. ಕಾಪು ಕ್ಷೇತ್ರವನ್ನು ಅನ್ಯರ ಪಾಲಾಗಿಸಲು ಪಕ್ಷದ ಪ್ರಮುಖ ಮುಖಂಡರೇ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಅವರು ದೂರಿದರು.

Be the first to comment

Leave a Reply

Your email address will not be published.


*