ಕಾರ್ಗಿಲ್ ವಿಜಯೋತ್ಸವ: ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಬೈಕ್ ರ‌್ಯಾಲಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಇಲ್ಲಿನ ನಗರದ ಮಾಜಿ ಸೈನಿಕರ ಸಂಘದಿಂದ ಎಲ್ಲೆಡೆ ಬೈಕ ರ‌್ಯಾಲಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ನಗರದಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದುಕೊಂಡು ಜೈಘೋಷಣೆ ಕೂಗುತ್ತ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.

ನಗರದ ಶ್ರೀ ಬಿಳೂರ ದೇವಸ್ಥಾನ ದಿಂದ ಪ್ರಾರಂಭವಾಗಿ,ನವನಗರ, ವಿದ್ಯಾಗಿರಿ ಯಲ್ಲಿ ಬೈಕ್ ಮೂಲಕ ರ‌್ಯಾಲಿ ಸಂಚರಿಸಿ ಶ್ರೀ ಬಿಳೂರ ದೇವಸ್ಥಾನಕ್ಕೆ ಮುಕ್ತಾಯ ವಾಯಿತು.

ನಗರದ ಸಂಘಸಂಸ್ಥೆಗಳು ಹಾಗೂ ಪ್ರಮುಖರು ಭಾಗವಹಿಸಿ ದೇಶಭಕ್ತ ಘೋಷಣೆ ಗಳನ್ನು ಹಾಕಿದರು ಬೈಕ್ ರ‌್ಯಾಲಿಗೆ ನಗರದ ಸರ್ಕಲ್ ಇನ್ಸ್ಪೆಕ್ಟರ್ ಅವಜೀ,ಕಾಮಧೇನು ಸಂಸ್ಥೆ ಅಧ್ಯಕ್ಷರು ರವಿ ಕುಮಟಗಿ, ಕಾಮಧೇನು ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ ಚಾಲನೆ ನೀಡಿದರು.

ಬೈಕ್ ರ‌್ಯಾಲಿಯಲ್ಲಿ ಘನಶಾಮ ಬಾಂಡಗೆ,ಮಾಜಿ ಸೈನಿಕರು ಉಮೇಶ ತೇಲಕರ, ಮಂಜುನಾಥ ಹಿರೇಮಠ, ಹಾಗೂ ಸೈನಿಕರು ನಗರದ ಯುವಕರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*