ಕಬ್ಬೂರ ಗ್ರಾಮದಲ್ಲಿ ಪೋಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ವರದಿ:ವರದಿಗಾರ: ಸಿದ್ದು ಮುಳಕೂರ ಚಿಕ್ಕೋಡಿ


    ಜೀಲ್ಲಾ ಸುದ್ದಿಗಳು


ಕಬ್ಬೂರ್: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ್ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ. ಸರ್ಕಾರಿ ಪ್ರೌಢಶಾಲೆ ಕಬ್ಬೂರ್ ದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಜರುಗಿತು. ಕಬ್ಬೂರ್ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹೆಡ್ ಕಾನ್ಸ್ಟೇಬಲ್ ಪಿ.ಎಚ್.ಕಾಂಬಳೆ ಮತ್ತು ವಿ.ಕೆ.ಸಾಲಿಮನಿಯವರು ವಿದ್ಯಾರ್ಥಿಗಳಿಗೆ ಅಪರಾಧಗಳನ್ನು ತಡೆಯುವಿಕೆ ಹಾಗೂ ಸಲಹೆ ಸೂಚನೆಗಳನ್ನು ಹೇಳಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಬಸ್ತವಾಡಿ ಸರ್, ಹಾಗೂ ಪ್ರೌಢ ಶಾಲೆಯ ಶಿಕ್ಷಕರಾದ ಪಾಟೀಲ್ ಸರ್, ರವೀಂದ್ರ ತೆಳಗಡೆ, ಮತ್ತು ಲೋಕೇಶ್ ಕಾಂಬಳೆ, ಎಲ್ಲ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪೊಲೀಸ್ ಇಲಾಖೆಯವರಿಗೆ ಅಭಿನಂದನೆ ಸಲ್ಲಿಸಿದರು.

 

Be the first to comment

Leave a Reply

Your email address will not be published.


*